ಪೆಟ್ರೋಲ್ ಬಂಕ್ ಗಳು ರಾತ್ರಿ 8 ರ ಮೇಲೆ ಬಂದ್!!!

ಮೈಸೂರು:

      ರಾತ್ರಿ 8 ಗಂಟೆ ಬಳಿಕ ಮೈಸೂರು ನಗರದಲ್ಲಿ ಪೆಟ್ರೋಲ್ ಬಂಕ್ ಗಳನ್ನು ಮುಚ್ಚಲಾಗುವುದು ಎಂಬ ಎಚ್ಚರಿಕೆ ಸಂದೇಶವನ್ನು ಫೆಡರೇಷನ್ ಆಫ್ ಇಂಡಿಯಾ ಪೆಟ್ರೋಲಿಯಂ ಟ್ರೇಡರ್ಸ್ ನೀಡಿದೆ.

      ಕಳೆದ ಕೆಲವು ದಿನಗಳಿಂದ ರಾತ್ರಿಯ ವೇಳೆ ಪೆಟ್ರೋಲ್ ಬಂಕ್ ಸಿಬ್ಬಂದಿಗಳ  ಮೇಲೆ ಸಮಾಜಘಾತುಕ ಕಿಡಿಗೇಡಿಗಳಿಂದ ದೌರ್ಜನ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಜೀವಕ್ಕೆ ಭದ್ರತೆ ಇಲ್ಲದ ಕಾರಣ ಇನ್ನೂ ಮುಂದೆ ಸಂಜೆ 8 ಗಂಟೆಗೆ ಪೆಟ್ರೋಲ್ ಬಂಕ್ ಗಳನ್ನು ಮುಚ್ಚಲಾಗುವುದು ಎಂದು ಪೆಟ್ರೋಲಿಯಂ ಟ್ರೇಡರ್ಸ್ ಸಂಘದ ಅಧ್ಯಕ್ಷ ಬಸವೇಗೌಡ ತಿಳಿಸಿದ್ದಾರೆ. 

ಮಚ್ಚು ತೋರಿಸಿ, ಪೆಟ್ರೋಲ್ ಬಂಕ್ ನ 2.50 ಲಕ್ಷ ದರೋಡೆ!!

      ಪದೇ ಪದೆ  ಬಂಕ್ ಗಳಲ್ಲಿ  ಇಂತಹ ದುರ್ಘಟನೆಗಳು ನಡೆಯುತ್ತಿದ್ದು, ಇದರಿಂದ ಭಯದ ವಾತಾವರಣ ಮೂಡಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಗಬೇಕೆಂದು ಒತ್ತಾಯಿಸುತ್ತಿದ್ದಾರೆ. 

Recent Articles

spot_img

Related Stories

Share via
Copy link
Powered by Social Snap