ಪ್ರತಿಭಟನೆ : ಶಾಸಕ ಜಮೀರ್​ ಅಹ್ಮದ್​ ಪೊಲೀಸರ ವಶಕ್ಕೆ!!

ಬಳ್ಳಾರಿ :

      ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಮನೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್  ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

       ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹಿಂದೆ ಮಾಡಿದ್ದ ಆಕ್ಷೇಪಾರ್ಹ ಭಾಷಣ ಖಂಡಿಸಿ‌ ಅವರ ಮನೆ‌ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು. ಆದರೆ, ಜಮೀರ್ ಅಹ್ಮದ್ ಖಾನ್ ಅವರನ್ನು ಪೊಲೀಸರು ಅರ್ಧದಲ್ಲಿಯೇ ತಡೆದು ವಶಕ್ಕೆ ಪಡೆದಿದ್ದಾರೆ.

     ಕೆಲ ದಿನಗಳ ಹಿಂದೆ ಸಿಎಎ ಬೆಂಬಲಿಸಿ ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಮುಸ್ಲಿಂ ಸಮುದಾಯದ ಕುರಿತು ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಜಮೀರ್ ಅಹ್ಮದ್, ರೆಡ್ಡಿ ಎಲ್ಲಪ್ಪ ನಿನ್ನ ಖಡ್ಗ ಎಂದು ಸವಾಲು ಹಾಕಿದ್ದರು. ತಾಕತ್ತಿದ್ದರೆ ತಡೆಯಲಿ..ನಾನೇ ಅವನ ಮನೆ ಮುಂದೆ ಹೋಗಿ ಧರಣಿ ಮಾಡ್ತೀನಿ ಎಂದು ಸೋಮಶೇಖರ ರೆಡ್ಡಿಗೆ ಜಮೀರ್ ಇತ್ತೀಚೆಗೆ​ ಸವಾಲೆಸೆದಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap