ಖಾತೆ ಕ್ಯಾತೆ ; ಮೂವರು ಸಚಿವರ ಖಾತೆ ಮರು ಹಂಚಿಕೆ!

ಬೆಂಗಳೂರು:

      ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಎಬ್ಬಿಸಿದ್ದ ಖಾತೆ ಅದಲು-ಬದಲು ಆಟ ಕೊನೆಗೂ ಅಂತ್ಯ ಕಂಡಿದ್ದು, ಮೂವರಿಗೆ ಖಾತೆಗಳನ್ನು ಮರು ಹಂಚಿಕೆ ಮಾಡಲಾಗಿದೆ. 

     ಸಚಿವ ಸುಧಾಕರ್ ಒತ್ತಡಕ್ಕೆ ಕಡೆಗೂ ಮಣಿದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಖಾತೆಯನ್ನು ಮರಳಿ ಸುಧಾಕರ್ ಗೆ ನೀಡಿದ್ದು, ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಖಾತೆಯನ್ನೂ ಬದಲಿಸಿ ಅಧಿಕೃತ ಆದೇಶ ಪಟ್ಟಿ ಪ್ರಕಟಿಸಿದ್ದಾರೆ.

     ಸುಧಾಕರ್​ಗೆ ಆರೋಗ್ಯ ಖಾತೆ ಜೊತೆಗೆ ವೈದ್ಯಕೀಯ ಶಿಕ್ಷಣ, ಜೆ.ಸಿ ಮಾಧುಸ್ವಾಮಿಗೆ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ, ಆನಂದ್ ಸಿಂಗ್​​ಗೆ ಹಜ್ ಮತ್ತು ವಕ್ಫ್ ಇಲಾಖೆ ಜತೆಗೆ ಮೂಲಸೌಕರ್ಯಾಭಿವೃದ್ಧಿ ಖಾತೆಯನ್ನೂ ನೀಡಲಾಗಿದೆ. ಈ ಮೂಲಕ ಸಚಿವ ಸುಧಾಕರ್‌ ಬಯಸಿದಂತೆ ಎರಡು ಖಾತೆ ಪಡೆದಿದ್ದಾರೆ.

      ಕಳೆದ ರಾತ್ರಿ ಸಚಿವರ ಖಾತೆ ಮರು ಹಂಚಿಕೆ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜಭವನಕ್ಕೆ ಕಳುಹಿಸಿಕೊಟ್ಟಿದ್ದು, ಇದೀಗ ರಾಜ್ಯಪಾಲರು ಖಾತೆಗಳ ಮರು ಹಂಚಿಕೆ ಪಟ್ಟಿಗೆ ಅಂಕಿತ ಹಾಕಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap