ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುತ್ತೇನೆ ಎಂದ ಯುವತಿ

ಬೆಂಗಳೂರು : 

     ನನಗೆ ಕೊಡುತ್ತಿರುವ ಕಿರುಕುಳಕ್ಕೆ ಬದುಕಬೇಕಾ ಅಥವಾ ಸಾಯಬೇಕಾ ಅನಿಸುತ್ತಿದೆ. ರಮೇಶ್​ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಅನಿಸುವಷ್ಟು ಟಾರ್ಚರ್​ ಆಗಿದೆ ಎಂದು ಯುವತಿ ಬೆಳ್ಳಂಬೆಳಗ್ಗೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾಳೆ.

     ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ ಅದರಂತೆ ಇಂದು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ಯುವತಿ ”  ಆಡಿಯೋದಲ್ಲಿ ಡಿಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪವಾದ ಕಾರಣ ಅದಕ್ಕೆ ಸಮಜಾಯಿಷಿ ನೀಡುವಂತೆ ಯುವತಿ ಮಾತನಾಡಿದ್ದಾಳೆ. ವಿಡಿಯೋ ಲೀಕ್ ಆದಾಗ ನಾನು ಮಾಧ್ಯಮದಲ್ಲಿ ಪರಿಚಯವಾಗಿದ್ದ ನರೇಶ್ ಗೆ ಕರೆ ಮಾಡಿದ್ದೆ. ನಾನು ಈ ವಿಚಾರದಲ್ಲಿ ಸಣ್ಣವ. ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಅವರ ಬಳಿ ಮಾತನಾಡೋಣ ಎಂದು ಅವರು ಹೇಳಿದ್ದರು. ಅದಲ್ಲದೆ ನಾನು ಮತ್ತು ನರೇಶ್ ಅವರು ಡಿ.ಕೆ.ಶಿವಕುಮಾರ್ ಭೇಟಿಗೆ ಹೋದೆವು. ಆದರೆ ಅವರು ಸಿಗಲಿಲ್ಲ ಎಂದಿದ್ದಾಳೆ.

     ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ಆದರೆ ನನ್ನ ಅಪ್ಪ ಅಮ್ಮನಿಗೆ ಭದ್ರತೆಯಿಲ್ಲ. ಅಪ್ಪಅಮ್ಮ, ಅಜ್ಜಿ, ಇಬ್ಬರು ತಮ್ಮಂದಿರನ್ನು ಎಸ್ ಐಟಿಯವರು ಬೆಂಗಳೂರಿಗೆ ತಂದಿರಿಸಬೇಕು. ಅವರ ಕಣ್ಮುಂದೆಯೇ ನಾನು ಹೇಳಿಕೆ ನೀಡುತ್ತೇನೆ ಎಂದು ಯುವತಿ ಹೇಳಿದ್ದಾಳೆ.

      ಒಂದೇ ದಿನದಲ್ಲಿ ನಾನು ಸರ್ಕಾರ ಬೀಳಿಸಬಲ್ಲೆ, ಎಷ್ಟು ದುಡ್ಡು ಬೇಕಾದರೂ ಖರ್ಚಾಗಲಿ ಎಂದು ಜಾರಕಿಹೊಳಿ ಹೇಳಿದ್ದಾರೆ. ಇದರ ಅರ್ಥವೇನು…? ನನಗೆ ತುಂಬಾ ಹಿಂಸೆಯಾಗುತ್ತಿದೆ. ನನಗೆ ಬದುಕಬೇಕೋ ಸಾಯಬೇಕೊ ಗೊತ್ತಿಲ್ಲ, ರಮೇಶ್ ಜಾರಕಿಹೊಳಿ ಅವರ ಹೆಸರು ಬರೆದುಬಿಟ್ಟು ನಾನು ಸಾಯಬೇಕು ಅನಿಸುತ್ತಿದೆ ಎಂದು ಯುವತಿ ಹೇಳಿದ್ದಾಳೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap