ಭೀಕರ ರಸ್ತೆ ಅಪಘಾತ : ವೈದ್ಯ ಸಾವು!!

ಕುಶಾಲನಗರ:

     ಮಾರುತಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಶಿರಂಗಾಲ ತೊರೆನೂರು ಬಳಿ ನಡೆದಿದೆ.

      ಡಾ. ಅಪ್ಪಯ್ಯ (60) ಮೃತಪಟ್ಟ ವೈದ್ಯರಾಗಿದ್ದು ಬೆಂಗಳೂರಿನಿಂದ ಕುಶಾಲನಗರಕ್ಕೆ ಹೊರಟಿದ್ದ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಂತಹದೊಂದು ಘಟನೆ ಸಂಭವಿಸಿದ್ದು ಲಾರಿ ಚಾಲಕನ ಅಜಾಗರೂಕತೆಯೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.

      ಕುಶಾಲನಗರ ದಲ್ಲಿರುವ ತನ್ನ ಮಗಳನ್ನು ನೋಡಲು ಡಾಕ್ಟರ್ ಅಪ್ಪಯ್ಯ ಹಾಗೂ ಪತ್ನಿ ಮೀನಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು ಈ ವೇಳೆ ಕುಶಾಲನಗರದ ಶಿರಂಗಾಲ ಬಳಿಯ ತೊರೆನೂರು ಬಳಿ ಎದುರಿನಿಂದ ಅತಿ ವೇಗವಾಗಿ ಬಂದ ಲಾರಿ ಮಾರುತಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಡಾಕ್ಟರ್ ಅಪ್ಪಯ್ಯ ಮೃತಪಟ್ಟರೆ ಪತ್ನಿ ಮೀನಾಗಿ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

       ಡಾಕ್ಟರ್ ಅಪ್ಪಯ್ಯ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಹಾಗೂ ಯಡಿಯೂರಪ್ಪನವರ ಕಾಲದಲ್ಲೂ ಅವರೊಟ್ಟಿಗೆ ಕೆಲಸ ಮಾಡಿದ್ದು ಹಾಸನ ನಗರದ ರಾಘವೇಂದ್ರ ಟ್ರೇಡರ್ಸ್ ಮಾಲೀಕರಾದ ಅನಿಲ್ ಕುಮಾರ್ ಮತ್ತು ಮಹೇಶ್ ಅವರ ಸಂಬಂಧಿಗಳ ಆಗಿರುತ್ತಾರೆ.

      ಘಟನೆ ಸಂಭವಿಸಿದರೂ ಕೂಡ ಕಾರಿನಲ್ಲಿದ್ದ ನಾಯಿಯೊಂದು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದು, ಮೃತಪಟ್ಟ ಮಾಲೀಕನ ನೋವಿನಿಂದ ಕೆಲಕಾಲ ಕೂಗಾಟ ನಡೆಸಿದ್ದು ಎಂಥವರನ್ನು ಮನಕಲಕುವಂತಿತ್ತು.

      ಇನ್ನು ಇದೇ ವೇಳೆ ಹಾಸನದಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಸಂಪಾದಕರಾದ ಸುರೇಶ್ ರವರು ಅಪಘಾತಕ್ಕೊಳಗಾದ ಕುಟುಂಬ  ವರ್ಗದವರನ್ನು ತಕ್ಷಣ ತಮ್ಮ ಕಾರಿನಲ್ಲಿ ಕುಶಾಲನಗರಕ್ಕೆ ಕೊಂಡೊಯ್ದು ಅವರಿಗೆ ಹೆಚ್ಚಿನ ಚಿಕಿತ್ಸೆಯನ್ನು ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

      ಇನ್ನು ಈ ಸಂಬಂಧ ಕುಶಾಲನಗರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap