ತುಮಕೂರು : ‘ಸಹಕಾರ ರತ್ನ” ಎಸ್.ಎನ್.ಕೃಷ್ಣಯ್ಯ ಇನ್ನಿಲ್ಲ!!

ತುಮಕೂರು : 

     ಜಿಲ್ಲೆಯ ಹಿರಿಯ ಸಹಕಾರಿ ಧುರೀಣ, ‘ಸಹಕಾರಿ ರತ್ನ’ ಪ್ರಶಸ್ತಿ ಪುರಸ್ಕೃತ ಶ್ರೀ ಎಸ್ ಎನ್ ಕೃಷ್ಣಯ್ಯ ನವರು ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

     ಕೃಷ್ಣಯ್ಯನವರು ಸಿರಾದ ಸಾಮಾಜಿಕ ಹಾಗೂ ಸಾಂಸ್ಕೃತಿಕವಲಯದಲ್ಲಿ ಚಿರಪರಿಚಿತರಾಗಿದ್ದು, ಅವರ ಸಾವು ತುಂಬಲಾರದ ನಷ್ಟ ಎಂದು ಅನೇಕ ಗಣ್ಯರು ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.

      ತುಮಕೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷವಾಗಿ, ಸಿರಾ ಟೌನ್ ಕೋ ಆಪ್ ಬ್ಯಾಂಕ್ ಅಧ್ಯಕ್ಷರಾಗಿ, ಸಹಕಾರ ಮಹಾಮಂಡಳ ದ ಉಪಾಧ್ಯಕ್ಷರಾಗಿ, ರಾಜ್ಯ ಚಲನಚಿತ್ರ ಮಹಾಮಂಡಳದ ಉಪಾಧ್ಯಕ್ಷರಾಗಿ, ಅವರ ಸೇವೆ ಗಣನೀ ಯವಾಗಿದೆ.

     ಇಂದು ಶಿರಾದಲ್ಲಿ ಅಂತಿಮ ದರ್ಶನ ಹಾಗೂ ವಿಧಿ ವಿಧಾನಗಳು ನೆರವೇರಲಿವೆ ಎಂದು ತಿಳಿದುಬಂದಿದೆ. ಕಳೆದ ತಿಂಗಳಷ್ಟೇ ಪ್ರಗತಿ ವಾಹಿನಿಯಲ್ಲಿ ನಡೆದಿದ್ದ ಸಹಕಾರಿ ಸಪ್ತಾಹ ಸಂವಾದ ದಲ್ಲಿ ಭಾಗವಹಿಸಿ ದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

Recent Articles

spot_img

Related Stories

Share via
Copy link
Powered by Social Snap