ತಿಪ್ಪರಲಾಗ ಹೊಡೆದರೂ ಯಡಿಯೂರಪ್ಪ ಸಿಎಂ ಆಗಲ್ಲ !!

ಬೆಂಗಳೂರು:

 

     ತಿಪ್ಪರಲಾಗ ಹೊಡೆದರೂ ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆಗುವುದಿಲ್ಲ. ಅವರ ಕನಸು ನನಸಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

     ಆಪರೇಷನ್​ ಕಮಲ ವಿಫಲದ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, 2008ರಲ್ಲಿ ಆಪರೇಷನ್ ಎಂಬ ಪದವನ್ನು ಪ್ರಾರಂಭಿಸಿದ್ದೇ ಯಡಿಯೂರಪ್ಪನವರು. ಅವರದೇ ಯೋಜನೆ ಈಗ ಅವರಿಗೆ ಮುಳುವಾಗಿದೆ. ಯಡಿಯೂರಪ್ಪನವರು ಒಮ್ಮೆ ಮುಖ್ಯಮಂತ್ರಿಯಾಗಿದ್ದು,  ನಾಚಿಕೆ, ಮಾನ ಮರ್ಯಾದೆ ಬಿಟ್ಟು ವಾಮಮಾರ್ಗದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದಾರೆ. ಎಂದು ಹರಿಹಾಯ್ದಿದ್ದಾರೆ.

      ಬಿಜೆಪಿಯವರು ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಕೆಲಸ ಮಾಡಬೇಕು. 104 ಜನರನ್ನು ಕರೆದುಕೊಂಡು ಹೋಗಿ ಬಿಜೆಪಿಯವರು ಹರಿಯಾಣದಲ್ಲಿ ಇಟ್ಟುಕೊಂಡಿದ್ದಾರೆ. ಇದೊಂದು ಅಸಹ್ಯ ರಾಜಕಾರಣ. ಎಂದು ವಾಗ್ದಾಳಿ ನಡೆಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap