ಮಂಗಳೂರು:
ವ್ಯಕ್ತಿಯೊಬ್ಬ ತನ್ನ ಬುಲೆಟ್ ಬೈಕಿನಲ್ಲಿ ಸಂಚರಿಸುತ್ತಿದ್ದಾಗ ದಿಢೀರ್ ಆಗಿ ನಾಗರಹಾವು ಪ್ರತ್ಯಕ್ಷವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಇದೇ ಅನುಭವ ಆಗಿದ್ದು ಮರಕಡ ನಿವಾಸಿ ಬದ್ರುದ್ದೀನ್ ಕೂಳೂರು ಅವರಿಗೆ. ಕಾವೂರು ಆಟೋವರ್ಕ್ಸ್ ಮಾಲೀಕ ಹಾಗೂ ಕವಿಯೂ ಆಗಿರುವ ಬದ್ರುದ್ದೀನ್ ಎಂಬುವವರಿಗೆ.
ಭಾನುವಾರ ಮಧ್ಯಾಹ್ನ ಮರಕಡದ ತಮ್ಮ ಮನೆಯಿಂದ ನುಡಿಸಿರಿಗೆಂದು ಬುಲೆಟ್ ಬೈಕಲ್ಲಿ ಹೊರಟಿದ್ದರು. ಈ ವೇಳೆ ಚಲಿಸುತ್ತಿದ್ದ ಬುಲೆಟ್ ಬೈಕ್ನಲ್ಲಿ ದಿಢೀರನೇ ನಾಗರಹಾವು ಪ್ರತ್ಯಕ್ಷವಾಗಿ, ಹೆಡೆ ಎತ್ತುತ್ತಾ ಮರಿ ನಾಗರಹಾವು ದಿಢೀರನೇ ಮೀಟರ್ ಗೇಜ್ ಪಕ್ಕದಿಂದಲೇ ಹೊರಬಂದಿದೆ. ಇದರಿಂದ ಒಮ್ಮೆಲೆ ಗಾಬರಿಯಾದ ಬದ್ರುದ್ದೀನ್, ತಕ್ಷಣ ಬೈಕ್ ನಿಲ್ಲಿಸಿದ್ದಾರೆ.
ಅಲ್ಲಿದ್ದವರು ಯಾರೋ ಹಾವು ಹಿಡಿಯುವ ಗಂಗಯ್ಯ ಬೋಳಾರ್ ಎಂಬುವರಿಗೆ ಕರೆ ಮಾಡಿದ್ದಾರೆ.ಬೈಕ್ನ ಹೆಡ್ಲೈಟ್ ಕೆಳಭಾಗದಲ್ಲಿರುವ ವೈರುಗಳ ಎಡೆಯಲ್ಲಿ ಕುಳಿತು ತಲೆ ಎತ್ತಿ ನೋಡುತ್ತಿದ್ದ ಹಾವನ್ನು ಸ್ನೇಕ್ ಕ್ಯಾಚರ್ ಗಂಗಯ್ಯ ನಾಜೂಕಾಗಿ ಹಿಡಿದು ಗೋಣಿಗೆ ಹಾಕಿದರು. ಹಿಡಿದಿರುವ ಹಾವನ್ನು ಪಿಲಿಕುಳಕ್ಕೆ ಒಪ್ಪಿಸಲಿದ್ದಾರೆ.
ಬೆಕ್ಕು ನೀಡಿದ ಸೂಚನೆ :
ಹೊರಡುವಾಗಲೇ ಅವರ ಮನೆಯ ಬೆಕ್ಕು ಬೈಕ್ ಸುತ್ತ ಸುತ್ತುತ್ತಿತ್ತು, ಆದರೂ ಕಡೆಗಣಿಸಿ ಅವರು ಮರಕಡ ಪೆಟ್ರೋಲ್ ಬಂಕ್ಗೆ ಬಂದಿದ್ದಾರೆ. ಪೆಟ್ರೋಲ್ ಹಾಕಿಸಿ ಇನ್ನೇನು ರಸ್ತೆಗೆ ಇಳಿಯಬೇಕು ಎನ್ನುವಷ್ಟರಲ್ಲೇ ಬೈಕ್ನ ಕೀ ಹಾಕುವ ಜಾಗದ ಬಳಿಯಿಂದ ಪುಟಾಣಿ ನಾಗರಹಾವೊಂದು ತಲೆಯೆತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ