ಸ್ನೇಹಿತನ ರುಂಡವನ್ನೇ ಕತ್ತರಿಸಿ ಠಾಣೆಗೆ ತಂದ ಯುವಕ..! -ವಿಡಿಯೋ ನೋಡಿ

 ಮಂಡ್ಯ :

 

      ತನ್ನ ತಾಯಿಯ ಜೊತೆ ಅನುಚಿತವಾಗಿ ವರ್ತಿಸಿದನೆಂಬ ಕಾರಣಕ್ಕೆ ಸಿಟ್ಟಿಗೆದ್ದ ಮಗ ತನ್ನ ಸ್ನೇಹಿತನ ರುಂಡವನ್ನೇ ಕತ್ತರಿಸಿ ಠಾಣೆಗೆ ತಂದು ಶರಣಾಗಿರುವ ಘಟನೆ ವರದಿಯಾಗಿದೆ.

      ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದ ಪಶುಪತಿ (24) ತಲೆ ಕಡಿದುಕೊಂಡು ಮಳವಳ್ಳಿ ಪೊಲೀಸ್ ಠಾಣೆಗೆ ಬಂದ ಯುವಕ‌. ಅದೇ ಗ್ರಾಮದ ಗಿರೀಶ್(35) ಕೊಲೆಯಾದ ವ್ಯಕ್ತಿ. 

      ಸ್ನೇಹಿತ ಗಿರೀಶ್, ತನ್ನ ತಾಯಿಯನ್ನು ಕೆಟ್ಟದ್ದಾಗಿ ಸನ್ನೆ ಮಾಡಿದ. ಹಾಗಾಗಿ ನನಗೆ ಮೂರು ದಿನ ನಿದ್ದೆ ಕೂಡ ಬಂದಿರಲಿಲ್ಲ. ಇಂತವನನ್ನು ಬಿಟ್ಟರೆ ನಾನು ಬದುಕಿದ್ದು ಸತ್ತಂತೆ. ಹೀಗಾಗಿ ಆತನ ಹತ್ಯೆ ಮಾಡಿದೆ ಎಂದು ಪಶುಪತಿ ತಿಳಿಸಿದ್ದಾನೆ. ಹತ್ಯೆಗೈದ ಬಳಿಕ ರುಂಡ ಹಿಡಿದುಕೊಂಡು ಬೈಕ್‌ ಏರಿ 20 ಕಿ.ಮೀ ದೂರದಲ್ಲಿರುವ ಬೆಳಕವಾಡಿ ಠಾಣೆಗೆ ತಂದಿದ್ದಾನೆ.

      ಆರೋಪಿ ಕಡಿದು ತಂದ ರುಂಡ ಕಂಡು ಪೊಲೀಸ್ ಸಿಬ್ಬಂದಿ ಗಾಬರಿಗೊಂಡಿದ್ದಾರೆ. ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap