ಮಂಗಳೂರು:
ಕಾರಿನ ಗಾಜು ಒಡೆದು ಹಾಡುಹಗಲೇ 15 ಲಕ್ಷ ರೂಪಾಯಿ ನಗದನ್ನು ಕಳ್ಳರು ಎಗರಿಸಿರುವ ಘಟನೆ ಮಂಗಳೂರಿನ ಲೆಡಿಹಿಲ್ ವೃತ್ತದ ಬಳಿ ನಡೆದಿದೆ.
ಮಹಮ್ಮದ್ ರಿಜ್ವಾನ್ (46) ಹಣ ಕಳೆದುಕೊಂಡವರು. ಬೆಂಗಳೂರು ಮೂಲದ, ಪ್ರಸ್ತುತ ನಗರದ ಲೇಡಿಹಿಲ್ ಬಳಿ ವಾಸಿಯಾಗಿರುವ ರಿಜ್ವಾನ್ ಪತ್ನಿಯ ಜೊತೆ ಶುಕ್ರವಾರ ಬೆಳಗ್ಗೆ 11.30ರ ವೇಳೆಗೆ ಫಳ್ನೀರ್ನಿಂದ ಚಿಲಿಂಬಿಗೆ ಬಂದು, ಹಣದ ಬ್ಯಾಗನ್ನು ಕಾರಿನಲ್ಲಿಟ್ಟು ಬ್ಯಾಂಕಿಗೆ ತೆರಳಿದ್ದರು. ಈ ವೇಳೆ, ಬೈಕಿನಲ್ಲಿ ಬಂದ ಇಬ್ಬರು ಕಾರಿನ ಗ್ಲಾಸ್ ಒಡೆದು ಬ್ಯಾಗ್ನಲ್ಲಿದ್ದ 15 ಲಕ್ಷ ರೂ.ಎಗರಿಸಿ ಪರಾರಿಯಾಗಿದ್ದಾರೆ.
ಕೂಡಲೇ ಉರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು,ಇದರ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/12/f9892a8d7dd9c4815ef08a4b2cc.gif)