ಮೈಸೂರು :
ಮೃಗಾಲಯಕ್ಕೆ ಕರೆತಂದ 24 ಗಂಟೆಗಳಲ್ಲಿಯೇ ಹುಲಿ, ಕಾಳಿಂಗ ಸರ್ಪ ಮೃತಪಟ್ಟಿರುವ ಘಟನೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ನಡೆದಿದೆ.
ಈ ಬಗ್ಗೆ ಮೈಸೂರು ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ಅಧಿಕೃತವಾಗಿ ಮಾಹಿತಿ ನೀಡಿದ್ದು, ಪ್ರಾಣಿಗಳ ವಿನಿಮಯ ಯೋಜನೆಯಡಿ ಮಂಗಳೂರಿನ ಪಿಲಿಕೊಳ ಮೃಗಾಲಯದಿಂದ 2 ಹುಲಿ, 2 ಹಾವುಗಳನ್ನ ಮೈಸೂರು ಮೃಗಾಲಯಕ್ಕೆ ತರಿಸಲಾಗಿತ್ತು. ಆದರೆ ಪ್ರಾಣಿಗಳನ್ನು ಆರೋಗ್ಯ ವಿಚಾರಿಸಲು ಪ್ರತ್ಯೇಕವಾಗಿ ಇಡಲಾಗಿತ್ತು. ಫೆ. 29ರ ಬೆಳಗ್ಗೆ ಪೈಥಾನ್ ಹೆಸರಿನ ಕಿಂಗ್ ಕೋಬ್ರಾ ಸಾವನಪ್ಪಿತ್ತು. ನಂತರ ಭಾನುವಾರ ಬೆಳಗ್ಗೆ ಒಂದು ಹುಲಿ ಸಹ ಮೃಗಾಲಯದಲ್ಲಿ ಮೃತಪಟ್ಟಿದೆ. ಹುಲಿ ಹಾಗೂ ಕೋಬ್ರಾದ ಮೃತದೇಹವನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಲಿವರ್ ಸಮಸ್ಯೆಯಿಂದ ಕಾಳಿಂಗ ಸರ್ಪ ಮೃತಪಟ್ಟಿದ್ದರೇ, ಹೃದಯಾಘಾತದಿಂದ 5 ವರ್ಷದ ಹೆಣ್ಣು ಹುಲಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಪ್ರಾಣಿಗಳ ಸ್ಯಾಂಪಲ್ ಲ್ಯಾಬ್ ಗೆ ಕಳುಹಿಸಲಾಗಿದ್ದು, ರಿಪೋರ್ಟ್ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/03/Mysore-zoo.gif)