ಬೆಂಗಳೂರು :
ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿ ಬ್ರೇಕ್ ತೆಗೆದುಕೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಬೆಂಗಳೂರಿನಲ್ಲಿ ಪ್ರಚಾರಕ್ಕೆ ಧುಮುಕಿದ್ದಾರೆ.
ದರ್ಶನ್ ಇಂದು ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಪರ ಪ್ರಚಾರಕ್ಕೆ ಇಳಿದಿಯಲಿದ್ದು, ಈ ಕುರಿತು ಪಿಸ್ ಮೋಹನ್ ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.
#ChallengingStar & my good friend @dasadarshan will be the star of my campaign. Together, Darshan & I will hold a massive road-show at #CVRamanNagar & #Shantinagar pic.twitter.com/X7OfCKM8B4
— Chowkidar P C Mohan (@PCMohanMP) April 7, 2019
ಯುಗಾದಿ ಹಬ್ಬದ ಪ್ರಯುಕ್ತ ಮಂಡ್ಯಯ ಚುಣಾವಣಾ ಪ್ರಚಾರಕ್ಕೆ ಮೂರು ದಿನಗಳ ಬ್ರೇಕ್ ನೀಡಿದ್ದ ದರ್ಶನ್, ಇಂದು ಬೆಂಗಳೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ. ಈ ಹಿಂದೆ ಪಿ.ಸಿ. ಮೋಹನ್ ಪರ ದರ್ಶನ್ ಪ್ರಚಾರ ನಡೆಸಿದ್ದರು. ಮೋಹನ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ದರ್ಶನ್ ಇಂದು ಬೆಳಗ್ಗೆ 10.30 ರಿಂದ ತಿಪ್ಪಸಂದ್ರದಲ್ಲಿ ಪ್ರಚಾರ ಆರಂಭಿಸಲಿದ್ದಾರೆ.
ಈ ಬಾರಿ ಸುಮಲತಾ ಅಂಬರೀಶ್ ಪರ ಪ್ರಚಾರದಲ್ಲಿ ತೊಡಗಿರುವ ದರ್ಶನ್ ಸುಮಲತಾ ದೊಡ್ಡ ಮಗನಂತೆ ಬಿಡುವಿಲ್ಲದ ಪ್ರಚಾರ ನಡೆಸುತ್ತಿದ್ದಾರೆ. ಇದರ ಮಧ್ಯೆಯೇ ಅವರು ಇಂದು ತಮ್ಮ ಗೆಳೆಯ ಪಿ.ಸಿ.ಮೋಹನ್ ಪರ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/64205557.gif)