ಬಳ್ಳಾರಿ :
ಬುಧವಾರ ತಡರಾತ್ರಿ ಭಾರಿ ಗಾಳಿ ಸಹಿತ ಮಳೆಯಾಗಿದ್ದರಿಂದ ಹರಪನಹಳ್ಳಿಯ ಗುಂಡಿನಕೇರಿಯಲ್ಲಿ ಮನೆ ಗೋಡೆ ಕುಸಿದು ಒಬ್ಬ ಬಾಲಕಿ ಮೃತಪಟ್ಟಿದ್ದಾಳೆ.
9 ವರ್ಷದ ಸಹರಾ ಮೃತಪಟ್ಟ ಬಾಲಕಿ. ಸಿಮ್ರನ್ ಗಾಯಗೊಂಡಾಕೆ. ತಾಯಿ ರೇಷ್ಮಬಾನು ಮತ್ತು ಹರ್ಷದ್ ಪ್ರಾಯಾಣಪಾದಿಂದ ಪಾರಾದವರು. ತಡರಾತ್ರಿ ಬಿದ್ದ ಮಳೆಯಿಂದ ತೇವಗೊಂಡಿದ್ದ ರೇಷ್ಮಬಾನು ಅವರ ಮನೆಯ ಗೋಡೆ ತಡರಾತ್ರಿ 1.45ರಲ್ಲಿ ಕುಸಿದಿದೆ. ಸುಖ ನಿದ್ದೆಯಲ್ಲಿದ್ದ ಸಹರಾ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಮುಂಗಾರು ಪ್ರವೇಶಕ್ಕೆ ಮುನ್ನ ವರುಣ ಅಬ್ಬರಿಸಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಗಾಳಿ ಮಳೆಸುರಿದಿದ್ದು, ಹಲವು ಅವಾಂತರಗಳನ್ನ ಸೃಷ್ಟಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/06/pjimage-63.gif)