ಮೈಸೂರು:
ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಹಳೇ ಮೈಸೂರು ಭಾಗದ ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
ಹಳೇ ಮೈಸೂರು ಭಾಗವನ್ನು ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಚಿಂತನೆ ನಡೆಸಿಲಾಗಿದೆ.
ಬ್ರಾಂಡ್ ಅಂಬಾಸಿಡರ್ ಆಗುವಂತೆ ಸಚಿವ ಸಾ.ರಾ.ಮಹೇಶ್ ರವರು ಯದುವೀರ ಒಡೆಯರ್ ರವರಿಗೆ ಮನವಿ ಮಾಡಿದ್ದರು. ಸಚಿವರ ಮನವಿಗೆ ಒಪ್ಪಿಗೆ ನೀಡಿದ ಯದುವೀರ ಒಡೆಯರ್ ರಾಯಾಭಾರಿಯಾಗುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಯದುವೀರ್ ಅವರು ತಿಳಿಸಿರುವಂತೆ ಈ ಕಾರ್ಯ ಸಾಧಿಸಲು, ನಿಖರತೆ ಹೊಂದಲು, ರಚನಾತ್ಮಕವಾಗಿ ಮುಂದುವರೆಯುವ ಸಲುವಾಗಿ ಅವರಿಗೆ ಅನುಕೂಲಕರವಾಗುವ ಹಾಗೂ ಸೂಕ್ತವೆನಿಸುವ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಏರ್ಪಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
