ಗುಬ್ಬಿ:
ಸಬ್ ಇನ್ಸ್ಪೆಕ್ಟರನ್ನೆ ಚೇಸ್ ಮಾಡಿದ ಜನರು…!
ಎಸಿಬಿ ದಾಳಿ ವೇಳೆ ಸಿ.ಎಸ್.ಪುರ ಠಾಣೆಯಲ್ಲಿ ಸಿನಿಮೀಯ ಘಟನೆಪೆÇಲೀಸರ ವಶದಲ್ಲಿದ ಕಾರು ಬಿಡಲು 28 ಸಾವಿರ ರೂ ಲಂಚ ಬೇಡಿಕೆ ಇಟ್ಟು, 12 ಸಾವಿರ ರೂ ಪಡೆದು ಉಳಿದ 16 ಸಾವಿರ ಲಂಚ ಸ್ವೀಕರಿಸುವ ವೇಳೆ ತಾಲ್ಲೂಕಿನ ಸಿ.ಎಸ್.ಪುರ ಪಿಎಸ್ಐ ಸೋಮಶೇಖರ್ ಎಸಿಬಿ ಬಲೆಗೆ ಬಿದ್ದಿದ್ದು, ವಿಚಾರಣೆಯ ಅರ್ಧದಲ್ಲೇ ತನ್ನ ಮೊಬೈಲ್ ಜೊತೆ ಬೈಕ್ನಲ್ಲಿ ಪರಾರಿಯಾಗಿದ್ದು ನಂತರ ಸಾರ್ವಜನಿಕರು ಬೆನ್ನತ್ತಿ ಹಿಡಿಯಲು ಮುಂದಾದ ಘಟನೆ ತಾಲ್ಲೂಕಿನ ಸಿ.ಎಸ್.ಪುರದಲ್ಲಿ ಬುಧವಾರ ನಡೆದಿದ್ದು, ಪೆÇಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ.
ಹೆಡ್ ಕಾನ್ಸ್ಟೇಬಲ್ ಮೂಲಕ ಲಂಚ : ಕೌಟುಂಬಿಕ ಕಲಹದ ವಿಚಾರವಾಗಿ ಸಿ.ಎಸ್.ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬುವವರ ಮೇಲೆ ಕಳೆದ ಅಕ್ಟೋಬರ್ ತಿಂಗಳ 22 ರಂದು ದೂರು ದಾಖಲಾಗಿತ್ತು. ನ್ಯಾಯಾಲಯದಲ್ಲಿ ಜಾಮೀನು ಪಡೆದ ಚಂದ್ರಣ್ಣ ತನ್ನ ಕಾರು ಬಿಡಿಸಿಕೊಳ್ಳಲು ಬಂದ ಸಂದರ್ಭದಲ್ಲಿ ಪಿಎಸ್ಐ ಸೋಮಶೇಖರ್ 28 ಸಾವಿರ ರೂ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಚಂದ್ರಣ್ಣ ಈಗಾಗಲೇ 12 ಸಾವಿರ ಲಂಚ ನೀಡಿದ್ದ ಬಗ್ಗೆ ತಿಳಿಸಿ, ಉಳಿದ 16 ಸಾವಿರ ರೂ ಲಂಚವನ್ನು ಹೆಡ್ ಕಾನ್ಸ್ಟೇಬಲ್ ನಯಾಜ್ಅಹಮದ್ ಮೂಲಕ ಹಣ ನೀಡುವ ಸಮಯದಲ್ಲಿ ಎಸಿಬಿ ಇನ್ಸ್ಪೆಕ್ಟರ್ ವಿಜಯಲಕ್ಷ್ಮೀ ತಂಡ ಪಿಎಸ್ಐ ಸೋಮಶೇಖರ್ ಮತ್ತು ನಯಾಜ್ ಅವರನ್ನು ವಶಕ್ಕೆ ಪಡೆಯಿತು.
ಎಸಿಬಿ ವಿಚಾರಣೆ ವೇಳೆ ಪರಾರಿ : ತನಿಖೆ ಆರಂಭಿಸಿದ ಸಂದರ್ಭದಲ್ಲಿ ಠಾಣೆಯ ಎಲ್ಲಾ ಸಿಬ್ಬಂದಿಗಳ ಮೊಬೈಲ್ ಪಡೆದು ವಿಚಾರಣೆ ನಡೆಸಲಾಯಿತು. ಮಧ್ಯಾಹ್ನ ಊಟದ ಸಮಯದಲ್ಲಿ ಠಾಣೆಯಿಂದ ಹೊರಬಂದ ಪಿಎಸ್ಐ ಸೋಮಶೇಖರ್ ಬೈಕ್ ಏರಿ ಪರಾರಿಯಾಗಿದ್ದು, ಎಲ್ಲರಿಗೂ ಅಚ್ಚರಿ ತಂದಿದೆ.
ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಪೆÇಲೀಸ್ಠಾಣೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದ ದೃಶ್ಯ.ಬಲೆಗೆ ಬಿದ್ದ ಪಿಎಸೈ ಸೋಮಶೇಖರ್.ಸಿ.ಎಸ್.ಪುರ ಪೆÇಲೀಸ್ಠಾಣೆಯ ಮೆಲೆ ಎಸಿಬಿ ಅಧಿಕಾರಿಗಳು ಧಾಳಿ ಮಾಡಿದ್ದರ ಬಗ್ಗೆ ನಮ್ಮ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು.
-ರಾಹುಲ್ಕುಮಾರ್, ಎಸ್ಪಿ
ಡ್ರೈವರ್ನ ಹೈಡ್ರಾಮಾ…? : ಮೊಬೈಲ್ ಜೊತೆ ಬೈಕ್ ಏರಿ ತಪ್ಪಿಸಿಕೊಂಡ ಪಿಎಸೈ ಪರಾರಿ ಘಟನೆಯು ಸಿನಿಮಾ ರೀತಿಯಲ್ಲಿ ನಡೆದಿದ್ದು, ಸ್ಥಳದಲ್ಲಿದ್ದ ಪೆÇಲೀಸ್ ಅಧಿಕಾರಿಗಳ ಮುಂದೆ ನಡೆದ ಈ ಪಲಾಯನ ಘಟನೆಯು ಇಲಾಖೆಗೆ ತೀವ್ರ ಮುಜುಗರ ತಂದಿದೆ ಹಾಗೂ ಇಡೀ ಪ್ರಕರಣ ಮತ್ತು ಎಸ್ಕೇಪ್ ಹೈಡ್ರಾಮಾದೊಂದಿಗೆ ಠಾಣೆಯ ಚಾಲಕನ ಹೆಸರು ತಳುಕು ಹಾಕಿಕೊಂಡಿದ್ದು, ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
