ದೇವಸ್ಥಾನದ ಹುಂಡಿ ಕಳ್ಳತನ

ಚಿಕ್ಕಜಾಜೂರಿನ:


ಚಿಕ್ಕಜಾಜೂರಿನ ಶ್ರೀರಾಮಕೃಷ್ಣ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಕಳ್ಳರು ಕಬ್ಬಿಣದ ಹುಂಡಿಯನ್ನು ಓಡೆದು ಕಾಣಿಕೆ ಹಣ ಕಳ್ಳತನ ಮಾಡಿರುವುದು.ಚಿಕ್ಕಜಾಜೂರಿನ ಪ್ರಮುಖ ರಸ್ತೆಯಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಶ್ರೀರಾಮಕೃಷ್ಣ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಕಳ್ಳರು ಕಬ್ಬಿಣದ ಹುಂಡಿಯನ್ನು ಓಡೆದು ಕಾಣಿಕೆ ಹಣ ಕಳ್ಳತನ ಮಾಡಿದ್ದಾರೆ.

ಈ ಹುಂಡಿಯನ್ನು ಕಳೆದ ಸುಮಾರು ಆರು ತಿಂಗಳ ಹಿಂದೆ ದೇವಸ್ಥಾನದ ಸಮಿತಿಯವರು ಮಾಡಿಸಿದ್ದು ಇದರಲ್ಲಿ ಸುಮಾರು 8 ರಿಂದ 10 ಸಾವಿರ ರೂಪಾಯಿ ಕಾಣಿಕೆ ಹಣ ಇರಬಹುದು ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ ಅನಿಲ್‍ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಚಿಕ್ಕಜಾಜೂರು ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯ ದಶಮಿ ಅಂಗವಾಗಿ ಕಳೆದ 9 ದಿನಗಳ ಈ ದೇವಸ್ಥಾನದಲ್ಲಿ ವಿಶೇಷ ಪೊಜೆ ಜರಯಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷ ವೇಣುಗೋಪಾಲ್ ತಿಳಿಸಿದ್ದಾರೆ.
ಚಿಕ್ಕಜಾಜೂರು ಪಿಎಸ್‍ಐ ಬಹುಬಲಿ ಮತ್ತು ಅಪರಾದ ವಿಭಾಗದ ಪಿಎಸ್‍ಐ ಆರ್.ಬಿ.ಸ್ವಾಮಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ಚಿತ್ರದುರ್ಗದಿಂದ ಬೆರಳಚ್ಚು ಮತ್ತು ಸ್ವಾನ ದಳದ ಅಧಿಕಾರಿಗಳು ಆಗಮಿಸಿ ಪರೀಶೀಲನೆ ಮಾಡಿದ್ದಾರೆ ಪೋಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 

Recent Articles

spot_img

Related Stories

Share via
Copy link
Powered by Social Snap