ತುಮಕೂರು : ಅಂಗಡಿಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನ

ತುಮಕೂರು

    ತುಮಕೂರು ನಗರದ ಎಸ್ಐಟಿ ಹಾಗೂ ಎಸ್.ಎಸ್ ಪುರಂ ಮುಖ್ಯ ರಸ್ತೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದು ಸುಮಾರು 9ಕು ಹೆಚ್ಚು ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ವರದಿಯಾಗಿದೆ.

    ರಾತ್ರಿ ಕಳ್ಳರು ಕೈಚಳಕ ತೋರಿಸಿದ್ದು ವಿವಿಧ ಅಂಗಡಿಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ ಎಸ್ಐಟಿ ಮುಖ್ಯ ರಸ್ತೆಯ ಶ್ರೀರಂಗ ಮೆಡಿಕಲ್ಸ್ ,ಹೊನ್ನಾದೇವಿ ಡಯಾಗ್ನೋಸ್ಟಿಕ್, ಎನ್ಎಸ್ ಮೆಡಿಕಲ್ಸ್ ,ಆನಂದ್ ಅಂಡ್ ಸನ್ಸ್ ,ಮಂಜು ಮೆಡಿಕಲ್ ಸೇರಿದಂತೆ ಹಲವು ಅಂಗಡಿಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ ಇಂದು ಬೆಳಗ್ಗೆ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದ್ದು.

    ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶ್ರೀರಂಗ ಮೆಡಿಕಲ್ಸ್ ಮಾಲೀಕ ಕಳೆದ ಎರಡು ವರ್ಷದ ಹಿಂದೆಯೂ ಸಹ ಕಳ್ಳರು ಕೈಚಳಕ ತೋರಿಸಿದ್ದರು. ಪದೇಪದೇ ಈ ತರಹ ಜನನಿ ಬಿಡ ಪ್ರದೇಶದಲ್ಲಿ ಕಳ್ಳತನವಾಗುತ್ತಿರುವುದು ವರ್ತಕರು ಹಾಗೂ ಸಾರ್ವಜನಿಕರಿಗೆ ಆತಂಕ ಉಂಟು ಮಾಡಿದೆ ಹಾಗಾಗಿ ಇನ್ನಾದರೂ ಸಂಬಂಧಪಟ್ಟ ಇಲಾಖೆ ಕಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ

    ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಡಿವೈಎಸ್ಪಿ ಶ್ರೀನಿವಾಸ್ ಸೇರಿದಂತೆ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap