ತಿಪಟೂರು : ನಿಲ್ದಾಣವಿಲ್ಲದ ನೀರಿಗೆ ನಿಲ್ದಾಣ ಸಿಕ್ಕಿದೆ

 ತಿಪಟೂರು : 

      ನಮ್ಮ ಊರಿನ ಸುತ್ತಲು ನೀರು ಹರಿದರೂ ನಮಗೆ ನೀರು ಸಿಗುತ್ತಿರಲಿಲ್ಲ. ಬಿಎಸ್‍ವೈ ಮುಖ್ಯಮಂತ್ರಿಯಾದ ಮೇಲೆ ಹರಿಯುವ ನೀರಿಗೆ ನಿಲ್ದಾಣ ಸಿಕ್ಕಂತಾಗಿದೆ ಎಂದು ಸಣ್ಣನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

     ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಭದ್ರಾಪುರ ಕೆರೆಗೆ ತುಮಕೂರು ಹೇಮಾವತಿ ಎಡದಂಡೆ ನಾಲೆಯ 41.050 ಕಿ.ಮಿಯಲ್ಲಿ ನೀರನ್ನು ಎತ್ತಿ ತುಂಬುವ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಬಿ.ಎಸ್.ಯಡಿಯೂರಪ್ಪ ರೈತರಿಗೆ ಏನಾದರು ಮಾಡಬೇಕು ಎಂದಾಗ, ನಾನು ರೈತರಿಗೆ ಏನು ಮಾಡುವುದು ಬೇಡ ಅವರಿಗೆ ನೀರು ಕೊಟ್ಟರೆ ಅವರು ನಮ್ಮನ್ನು ನೆನೆಯುತ್ತಾರೆ ಎಂದೆ ಅದರಂತೆ ಇಂದು ಬೇರೆ ಕಡೆ ಹರಿಯುತ್ತಿದ್ದ ನೀರನ್ನು ನೋಡಿಕೊಂಡಿದ್ದ ನಮಗೆ ನೀರು ಸಿಗುವಂತಹ ಕೆಲಸವನ್ನು ಮಾಡಿಕೊಟ್ಟಿದ್ದಾರೆಂದು ತಿಳಿಸಿದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಾತನಾಡಿ ಇರುವ ನೀರನ್ನು ಸದ್ಬಳಕೆ ಮಾಡಿಕೊಂಡು, ನೀರನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲರ ಮೇಲಿದೆ ಎಂದರು.

      ಕಾರ್ಯಕ್ರಮದಲ್ಲಿ ತುರುವೇಕೆರೆ ಶಾಸಕರಾದ ಮಸಾಲ ಜಯರಾಮ್, ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕರು, ಸದಸ್ಯರುಗಳು, ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link