ತಿಪಟೂರು ಜಿಲ್ಲೆಯಾಗಲೆಂದು ತೇರಿಗೆ ಬಾಳೆಹಣ್ಣು ಎಸೆದು ಹರಕೆ!!

 ತಿಪಟೂರು : 

      ನಗರದ ಗ್ರಾಮದೇವತೆ ತಿಪಟೂರಮ್ಮನ ರಥೋತ್ಸವವು ಭಾನುವಾರ ಬೆಳಗ್ಗೆ ಸರಳವಾಗಿ ಜರುಗಿತು. ಕೋವಿಡ್ 2 ಮತ್ತು 3ನೇ ಅಲೆಯ ಹಿನ್ನೆಲೆಯಲ್ಲಿ ಕೊರೊನಾ ನಿಯಮಗಳನ್ನು ಪಾಲಿಸಿ ಸಂಪ್ರ್ರದಾಯದ ಪ್ರಕಾರವಾಗಿ ಬೆಳ್ಳಂಬೆಳಗ್ಗೆ ರಥೋತ್ಸವ ನಡೆಯಿತು. ಧ್ವಜ, ಪತಾಕೆ ಮತ್ತು ಹೂವಿನಿಂದ ಅಲಂಕೃತವಾದ ರಥಕ್ಕೆ ದೇವರನ್ನು ಕುಳ್ಳಿರಿಸಿ ಭಕ್ತಾದಿಗಳು ತೇರನ್ನೆಳೆದರು.

      ಈ ಸಂದರ್ಭದಲ್ಲಿ ರಥಕ್ಕೆ ಬಾಳೆಹಣ್ಣು ಹಾಗೂ ಕರಿಮೆಣಸನ್ನು ಎಸೆದರು. ಕೆಲವರು ರಥಕ್ಕೆ ಎಸೆದ ಕರಿಮೆಣಸನ್ನು ಆರಿಸಿಕೊಂಡು ಮುಂದಿನ ಬಾರಿ ನಾವು ಅಂದುಕೊಂಡ ಕಾರ್ಯಗಳು ಸಾಂಗೋಪಾಂಗವಾಗಿ ನಡೆದರೆ ದೇವಿಯ ಸೇವೆ ಮಾಡುವುದಾಗಿ ಹರಕೆ ಹೊತ್ತು ತಮ್ಮ ಭಕ್ತಿ ಮೆರೆದರು.

      ಜಿಲ್ಲೆಯಾಗಲೆಂದು ರಥಕ್ಕೆ ಬಾಳೆಹಣ್ಣು ಎಸೆತ : ಕಳೆದ ವರ್ಷದ ತೇರಿನಲ್ಲಿ ಕೊರೊನಾ ತೊಲಗಲೆಂದು ಬಾಳೆಹಣ್ಣಿನ ಮೇಲೆ ಗೋ ಕೊರೊನಾ ಗೋ ಎಂದು ಬರೆದು ಕೆಲವು ಭಕ್ತಾದಿಗಳು ಬರೆದು ತೇರಿಗೆ ಬಾಳೆಹಣ್ಣು ಎಸೆದಿದ್ದರು. ಈ ಬಾರಿ ತಿಪಟೂರು ಜಿಲ್ಲೆಯಾಗಲಿ ಎಂದು ಬರೆದು ಯುವಕರು ಬಾಳೆಹಣ್ಣನ್ನು ರಥಕ್ಕೆ ಎಸೆದರು. ಬೆಳಗಿನ ಭಾನುವಾರ ಜಾವ 4 ಗಂಟೆಯಿಂದ ಆರಂಭವಾದ ಜಿಡಿಮಳೆಯನ್ನು ಲೆಕ್ಕಿಸದೆ ಭಕ್ತಾದಿಗಳು ಮಳೆಯಲ್ಲಿ ನೆನೆದರೂ ಪರವಾಗಿಲ್ಲ, ದೇವಿಯ ರಥವನ್ನು ಎಳೆಯೋಣವೆಂದು ಛತ್ರಿಗಳನ್ನು ಹಿಡಿದು ನಿಂತು ರಥೋತ್ಸವವನ್ನು ಕಣ್ತುಂಬಿಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link