ತಿಪಟೂರು : ತುಂಬಿದ ಕೆರೆ-ಕಟ್ಟೆಗಳು ; ರಸ್ತೆ ಸಂಚಾರ ದುಸ್ತರ!!

 ತಿಪಟೂರು :

     ಚಿತ್ತಾ ಮಳೆಗೆ ಸಂಪೂರ್ಣವಾಗಿತೋಯ್ದುಹೋಗಿದ್ದ ಭೂಮಿತಾಯಿಗೆ ಈಗ ಸ್ವಾತಿಮಳೆಯ ಸಿಂಚನದಿಂದ ಹಳ್ಳ ಕೊಳ್ಳಗಳಿಗೆ ಮರುಜೀವ ಬಂದಿದ್ದುಎಲ್ಲಿ ನೋಡಿದರು ನೀರು ಎನ್ನುವಂತಾಗಿದೆ.

     ಶನಿವಾರರಾತ್ರಿಆರಂಭವಾಗಿರುವ ಸ್ವಾತಿಮಳೆಯು ಪ್ರಾರಂಭದಿಂದಲೇಅಬ್ಬರಿಸುತ್ತಿದ್ದು ಹವಾಮಾನಇಲಾಖೆಯು ಸಹ 4-5ದಿನ ಬಾರಿ ಮಳೆಯಾಗುತ್ತದೆ ಎಂಬ ಮಾಹಿತಿನ್ನು ನೀಡಿದೆ.ಸ್ವಾತಿಮಳೆ ಪ್ರಾರಂಭವಾದತಕ್ಷಣತಾಲೂಕಿನ ಕುಪ್ಪಾಳು, ಮದ್ಲೇಹಳ್ಳಿ, ಬೆನ್ನಾಯಕನಹಳ್ಳಿ, ಕೆರೆಗಳು ತುಂಬಿ ಕೋಡಿ ಬಿದ್ದಿರುವುದುಜನರಲ್ಲಿ ಹರ್ಷ ಮೂಡಿಸಿದೆ.

      ಬಸ್ತಿಹಳ್ಳಿ ಹಾಗೂ ಬುರುಡೇಘಟ್ಟ ಮಾರ್ಗವಾಗಿ ಎಡೇಹಳ್ಳಿಗೆ ಹೋಗುವ ರಸ್ತೆಯು ಸಂಪೂರ್ಣ ಹಾಳಾಗಿ ಹೋಗಿದ್ದು ಈಗ ರಸ್ತೆಯಲ್ಲಿ ಸಂಚರಿಸಲುಸಾಧ್ಯವಾಗದಷ್ಟು ನೀರುತುಂಬಿಕೊಂಡಿದ್ದುಎಲ್ಲಿಗುಂಡಿಇದೆ, ಎಲ್ಲಿರಸ್ತೆಇದೆಎಂಬುದೇ ತಿಳಿಯದಾಗಿದ್ದು ಅಕಸ್ಮಾತ್‍ರಸ್ತೆಯಲ್ಲಿ ಪ್ರಾಣಾಪಾಯವಾದರೆಯಾರು ಹೊಣೆ, ಶೀಘ್ರವಾಗಿ ರಸ್ತೆಯನ್ನು ಸರಿಪಡಿಸಿ ಎಂದು ಬಸ್ತಿಹಳ್ಳಿ ಗ್ರಾಮಸ್ಥರು ಆಗ್ರಹಸಿದ್ದಾರೆ.

ಚಿಗ್ಗಾವಿ-ನೆಲ್ಲಿಕೆರೆರಸ್ತೆ ಸಂಪರ್ಕಕಡಿತ :

      ತಾಲೂಕಿನ ನೊಣವಿನಕೆರೆ ಹೋಬಳಿಯ ಚಿಗ್ಗಾವಿ ಮತ್ತು ನೆಲ್ಲಿಕೆರೆಗೆ ಸಂಪರ್ಕಕಲ್ಪಿಸುವರಸ್ತೆಯಲ್ಲಿ ಬರುವಕರಿಕೆರೆಯಿಂದ ಮಲ್ಲಾಘಟ್ಟಕೆರೆಗೆ ಹೋಗುವ ಹಳ್ಳವು ರಭವಸವಾಗಿ ಹರಿಯುತ್ತಿದ್ದು ಸಾರ್ವಜನಿಕರುರಸ್ತೆಯನ್ನುದಾಟಲು ಹರಸಾಹಸ ಪಡುತ್ತಿದ್ದಾರೆಇಂದು ಮತ್ತೆ ಮಳೆಯೇನಾದರು ಬಂದರೆ ನಾಳೆ ರಸ್ತೆಯಲ್ಲಿ ನಷ್ಟು ನೀರು ಹೆಚ್ಚುವ ಸಾದ್ಯತೆ ಹೆಚ್ಚಾಗಿದೆ.

      ಈಗಾಗಲೇ ತಾಲೂಕಿನಲ್ಲಿ ಹೊನ್ನವಳ್ಳಿ, ಶಿವರ ಭಾಗದ ಕೆರೆಗಳನ್ನು ಬಿಟ್ಟು ಬಹುತೇಕ ಕೆರೆಗಳು ತುಂಬುತ್ತಿವೆತಾಲೂಕು ಆಡಳಿತ ಮಾತ್ರ ನಮಗೂ ಇದಕ್ಕೂ ಸಂಬಂಧವೇಇಲ್ಲವೆಂದು ಕುಳಿತುಕೊಂಡಿರುವುದರ ಜೊತೆಗೆ ಶಾಲೆ ಕಾಲೇಜುಗಳು ಆರಂಭವಾಗಿದ್ದು ವಿದ್ಯಾರ್ಥಿಗಳು ಎಲ್ಲಾದರೂ ನೀರಿಗೆ ಇಳಿದು ಅಪಾಯ ಸಂಭವಿಸುವ ಮೊದಲೇಎಚ್ಚರಿಸುವಕಾರ್ಯವನ್ನು ಮಾಡಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link