ಎಸ್‍ಟಿ ಮೀಸಲಾತಿಗೆ ಕುರುಬ ಸಮಾಜ ಒಗ್ಗೂಡಲು ಕರೆ

 ತಿಪಟೂರು  : 

      ಅಹಿಂದ ಸಮಾವೇಶವನ್ನು ಮಾಡಿ ಅದರಲ್ಲಿ ಯಶಸ್ವಿಯಾದ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾದರು. ಅದೇರೀತಿ ಎಸ್ಟಿ ಮೀಸಲಾತಿಗಾಗಿ ತಾಲ್ಲೂಕಿನ ಎಲ್ಲಾ ಕುರುಬ ಸಮಾಜದವರು ಒಗ್ಗೂಡಿ ಕಾರ್ಯಕ್ರಮಕ್ಕೆ ಹಾಜರಾಗಿ ಈ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಮಾಜಿ ವಿಧಾನಪರಿಷತ್ ಸದಸ್ಯರಾದ ಡಾ.ಹುಲಿನಾಯ್ಕರ್ ಮನವಿ ಮಾಡಿದರು.

      ನಗರದ ಸಿಂಗ್ರಿನಂಜಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಕುರುಬರ ಎಸ್.ಟಿ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ, ನೂತನವಾಗಿ ಆಯ್ಕೆಯಾಗಿರುವ ನಗರಸಭಾ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

     ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗಮನ ನೀಡುವ ಉದ್ದೇಶದಿಂದ ಎಸ್.ಟಿ ಮೀಸಲಾತಿ ಹೋರಾಟ ಮಾಡಲಾಗುತ್ತಿದೆ ಮೀಸಲಾತಿ ಸಿಕ್ಕಿದ್ದಲ್ಲಿ ಸುಮಾರು 15 ರಿಂದ 20 ಶಾಸಕ ಸ್ಥಾನವನ್ನು ಪಡೆಯಬೇಕೆಂದು ತಿಳಿಸಿದ ಅವರು, ಸಮಾವೇಶಕ್ಕೆ ಸುಮಾರು 15 ರಿಂದ 20 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡರೆ ಎಲ್ಲಾ ಪಕ್ಷಗಳು ನಮ್ಮಕಡೆ ತಿರುಗಿ ನೋಡುವಂತೆ ಮಾಡಬೇಕು. ಎಸ್.ಟಿ ಮೀಸಲಾತಿಯ ಅವಶ್ಯಕತೆ ಇದೆ. ಸಂವಿಧಾನದಲ್ಲಿ ರಾಜಕೀಯ ಶೈಕ್ಷಣಿಕ ಮೀಸಲಾತಿಯನ್ನು ಪಡೆಯಬಹುದು ಹಾಗಾಗಿ ಎಸ್.ಟಿ ಮೀಸಲಾತಿಯನ್ನು ಶೇಕಡಾ 100ರಷ್ಟು ಪಡೆದೇ ಪಡೆಯುತ್ತೇವೆ ಎಂದು ತಿಳಿಸಿದರು.

      ತೆಂಗು ಮತ್ತು ನರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಅನೇಕ ಸರ್ಕಾರಗಳು ಈ ಹೋರಾಟವನ್ನು ಹತ್ತಿಕ್ಕುತ್ತಿವೆ, ರಾಜಕೀಯವಾಗಿ ಶೈಕ್ಷಣಿಕವಾಗಿ ಎಲ್ಲ ಸೌಲಭ್ಯಗಳಿಂದ ವಂಚಿತವಾಗಿದ್ದೇವೆ. ನಾವು ಸುಮಾರು 50 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. 1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಚಿನ್ನಪ್ಪರೆಡ್ಡಿ ವರದಿ ಪ್ರಕಾರ ಶೈಕ್ಷಣಿಕ ಮೀಸಲಾತಿಯನ್ನು ಕಲ್ಪಿಸಲಾಗಿತ್ತು. ಆದರೆ ಮುಂದಿನ ಸರ್ಕಾರ ಅದನ್ನು ರದ್ದುಪಡಿಸಿತು. ರಾಜಕೀಯ ನಾಯಕರ ಭಿನ್ನಾಭಿಪ್ರಾಯದಿಂದ ನಮಗೆ ಮೋಸವಾಗಿದೆ ಎಂದರು.

     ಕಾಗಿನೆಲೆ ಶ್ರೀಗಳು ಮತ್ತು ನಿರಂಜನಶ್ರೀಗಳು ಈ ಎಸ್.ಟಿ ಹೋರಾಟವನ್ನ ಮುನ್ನೆಡಸುತ್ತಿದ್ದಾರೆ ಹಾಗಾಗಿ ಕರ್ನಾಟಕದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಅವರಿಗೆ ಸಹಕಾರ ನೀಡಬೇಕು ತುಮಕೂರಿನಲ್ಲಿ ಇದೆ 31ರಂದು ಪಾದಯಾತ್ರೆ ಹೊರಡುತ್ತದೆ. ಹಾಗಾಗಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

      ಮುಂದಿನ ತಿಂಗಳು 7 ತಾರೀಕು ಬೃಹತ್ ಸಮಾವೇಶ ಬೆಂಗಳೂರಿನಲ್ಲಿ ನಡೆಯುವುದರಿಂದ ತಾವುಗಳು ಮನೆಯಿಂದ ಒಬ್ಬೊಬ್ಬರನ್ನು ಕರೆದುಕೊಂಡು ಬಂದು ಸಹಕಾರ ನೀಡಬೇಕು ಎಂದು ತಿಳಿಸಿದರು.

      ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

      ತುಮಕೂರಿನ ರೇವಣಸಿದ್ದೇಶ್ವರ ಮಠದ ಶ್ರೀ ಬಿಂದುಶೇಖರ್‍ಒಡೆಯರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಿ.ನಾರಾಯಣ್, ಭಾಗ್ಯಮ್ಮರವಿಕುಮಾರ್, ಗೋವಿಂದರಾಜು, ಕೊಂಡವಾಡಿ ತಿಮ್ಮಯ್ಯ, ಜಕ್ಕನಹಳ್ಳಿ ಲಿಂಗರಾಜು, ಚಂದ್ರೇಗೌಡರು, ನಿರ್ದೇಶಕರಾದ ರಘುರಾಮ್, ಪುಟ್ಟರಾಜು ಮತ್ತು ನಗರದ ನಗರಸಭಾ ಸದಸ್ಯರುಗ್ರಾಮ ಪಂಚಾಯಿತಿ ಸದಸ್ಯರು ಸಮಾಜದ ಮುಖಂಡರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link