ಬೆಂಗಳೂರಿನ ಬಿಡದಿಯಿಂದ ತ್ರಿಪುರ ರಾಜ್ಯಕ್ಕೆ ವಿದ್ಯುತ್ ರಿಕ್ಷಾಗಳ ಸಾಗಣೆ

ಬೆಂಗಳೂರು:

 ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2030 ರ ವೇಳೆಗೆ ಭಾರತದಲ್ಲಿನ ಎಲ್ಲಾ ವಾಹನಗಳನ್ನು ವಿದ್ಯುತ್ ವಾಹನಗಳಾಗಿ ಪರಿವರ್ತಿಸುವ ದೃಷ್ಟಿಯನ್ನು ಹೊಂದಿದ್ದಾರೆ. ದೇಶದಲ್ಲಿ ಹೈಬ್ರಿಡ್ ಮತ್ತು ವಿದ್ಯುತ್ ವಾಹನಗಳು ಹೆಚ್ಚು ಜನಪ್ರಿಯವಾಗುತ್ತಿವೆ.

   ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವ್ಯಾಪಾರ ಅಭಿವೃದ್ಧಿ ಘಟಕವು, ಪ್ರಧಾನಮಂತ್ರಿಗಳ ಈ ಆಶಯವನ್ನು ನೆರವೇರಿಸುವ ನಿಟ್ಟಿನಲ್ಲಿ, ರೈಲ್ವೆ ವಿಭಾಗೀಯ ವ್ಯಸ್ಥಾಪಕರಾದ ಶ್ರೀ ಶ್ಯಾಮ್ ಸಿಂಗ್,

ಮಾರ್ಗದರ್ಶನದಲ್ಲಿ ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್ ಸಂಸ್ಥೆಯೊಂದಿಗೆ ವ್ಯವಹರಿಸಿ, ಬೊಮ್ಮಸಂದ್ರ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್ನ ಉತ್ಪಾದನಾ ಘಟಕದಿಂದ ಎಲೆಕ್ಟ್ರಿಕ್ ವಾಹನಗಳನ್ನು ಸಾಗಿಸಲು ಮುಂದಾಗಿದೆ.

ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಯ ತಂತ್ರಜ್ಞಾನದಲ್ಲಿ ಪ್ರವರ್ತಕರಾದ ಮಹೀಂದ್ರಾ ಎಲೆಕ್ಟ್ರಿಕ್, ಹಂಚಿಕೆಯ, ವಿದ್ಯುತ್ ಮತ್ತು ಸಂಪರ್ಕಿತ ಚಲನಶೀಲತೆಯ ಹೊಸ ಮಾದರಿಯನ್ನು ಬೆಂಬಲಿಸಲು ವಿದ್ಯುತ್ ವಾಹನಗಳ ವೈಯುಕ್ತಿಕ ಮತ್ತು ವಾಣಿಜ್ಯ ವಿಭಾಗಗಳನ್ನು ಹೊಂದಿದೆ.

ಬೆಂಗಳೂರು ವಿಭಾಗ, ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್ ಸಹಯೋಗದೊಂದಿಗೆ ಮಹೀಂದ್ರಾದ ಟ್ರೀಯೊ ಬ್ರಾಂಡ್‌ನ 150 ಎಲೆಕ್ಟ್ರಿಕ್ ರಿಕ್ಷಾಗಳನ್ನು ಬಿಡದಿಯಿಂದ ತ್ರಿಪುರ ರಾಜಯದಲ್ಲಿರುವ ಜಿರಾನಿಯಗೆ ಲೋಡ್ ಮಾಡುವ ಮೂಲಕ ರೂ. 24.79 ಲಕ್ಷ ಗಳಿಕೆ ಸಾಧಿಸಿದೆ .

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link