ತುಮಕೂರು : ಕೊಳಚೆ ನೀರಿನ ದುರ್ವಾಸನೆ ತಪ್ಪಿಸಲು ಮನವಿ

 ತುಮಕೂರು : 

      ನಗರದ ಕಲ್ಪತರು ಬಡಾವಣೆಯ ಒಳಚರಂಡಿಯ ಕೊಳಕು ನೀರು ಸರಾಗವಾಗಿ ಹರಿದು ಹೋಗದೆ ಮ್ಯಾನ್ ಹೋಲ್‍ನಿಂದ ಉಕ್ಕಿ ಹರಿಯುತ್ತಿದ್ದು, ಇದರಿಂದ ಬಡಾವಣೆಯ ನಾಗರಿಕರು ದುರ್ವಾಸನೆ ಸಹಿಸಲು ಸಾಧ್ಯವಾಗುತ್ತಿಲ್ಲ.

     ಯುಜಿಡಿಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ಇಳಿಜಾರು ವ್ಯವಸ್ಥೆ ಮಾಡದೆ ಬೇಕಾಬಿಟ್ಟಿ ಒಳಚರಂಡಿ ನಿರ್ಮಾಣ ಮಾಡಿದ ಕಾರಣ ಹೀಗಾಗಿರುತ್ತದೆ. 

      ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಂತಹ ಅವ್ಯವಸ್ಥೆ ಆಗಿದೆ. ಒಂದು ವರ್ಷದಿಂದ ಮಾಡಲಾದ ಮನವಿಗಳಿಂದಲೂ ಈವರೆಗೆ ಸಮಸ್ಯೆ ಬಗೆಹರಿದಿಲ್ಲ. ಲಾಕ್‍ಡೌನ್‍ನಿಂದಾಗಿ ಮನೆಯಿಂದ ಹೊರಗೆ ಹೋಗುವಂತಿಲ್ಲ, ಮ್ಯಾನ್ ಹೋಲ್‍ನಿಂದ ಉಕ್ಕಿ ಹರಿಯುವ ಕೊಳಚೆ ನೀರಿನ ವಾಸನೆಯಿಂದಾಗಿ ಯಾತನೆ ಅನುಭವಿಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳುವಂತೆ ಕಲ್ಪತರು ಬಡಾವಣೆಯ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಗಿರಿರಾಜ್ ಅವರು ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap