ತುಮಕೂರು : ಕೇಂದ್ರ – ರಾಜ್ಯ ಸರಕಾರದ ವಿರುದ್ಧ ಕೈ ನಾಯಕರ ವಾಗ್ದಾಳಿ

 ತುಮಕೂರು : 

      ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರ ನೇತೃತ್ವದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಹಿರಿಯ ನಾಯಕರ ಸಮಾಲೋಚನಾ ಸಭೆ ಹಾಗೂ ಬ್ಲಾಕ್ ಕಾಂಗ್ರೆಸ್ ಮುಖಂಡರಗಳೊಂದಿಗೆ ಸಂಘಟನಾ ಸಭೆ ನಡೆಯಿತು.

ಹಿರಿಯ ನಾಯಕರ ಸಭೆಯಲ್ಲಿ ಪಾಲ್ಗೊಂಡ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಶಾಸಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಶಾಸಕರಾದ ವೆಂಕಟರಮಣಪ್ಪ, ಡಾ.ಕೆ.ರಂಗನಾಥ್, ಮಾಜಿ ಶಾಸಕರಾದ ಕೆ.ಷಡಾಕ್ಷರಿ, ಎಸ್.ಷಫಿ ಅಹಮದ್, ಡಾ.ರಫೀಕ್ ಅಹಮದ್, ಆರ್.ನಾರಾಯಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಚೌದ್ರಿರಂಗಪ್ಪ ಮತ್ತಿತರರು ಜಿಲ್ಲಾಕಾಂಗ್ರೆಸ್‍ಗೆ ನೂತನ ಸಾರಥಿ ಆಯ್ಕೆಸೇರಿದಂತೆ ಪಕ್ಷ ಸಂಘಟನೆ, ಜು.7ರಿಂದ ಆರಂಭವಾಗುವ ಸೈಕಲ್ ಜಾಥಾ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

      ಬಳಿಕ ನಡೆದ ಬ್ಲಾಕ್ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಕೈ ನಾಯಕರು ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ವಾಗ್ಗಾಳಿ ನಡೆಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಬೇರುಗಳು ಬಲಿಷ್ಠವಾಗಿದೆ. ಹಿರಿಯರು, ಯುವ ನಾಯಕತ್ವಕ್ಕೂ ಕೊರತೆಯಿಲ್ಲ. ಮುಂಬರುವ ಜಿಪಂ ತಾಪಂ ಚುನಾವಣೆ ಸೇರಿದಂತೆ ಮುಂದಿನ ವಿಧಾನಸಭೆ ಚುನಾವಣೆಗೆ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷ ಗೆಲುವು ಸಾಧಿಸುವಂತೆ ಈಗಿನಿಂದಲೇ ಬ್ಲಾಕ್ ಹಾಗೂ ಬೂತ್‍ಮಟ್ಟದಲ್ಲಿ ಶ್ರಮಿಸುವಂತೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವಂತೆ ಸಲಹೆ ನೀಡಿದರು.

ರಫೇಲ್ ಡೀಲ್‍ನಿಂದಾಗಿ ಜಾಗತಿಕವಾಗಿ ಮರ್ಯಾದೆ ಹರಾಜು: ಪರಂ 

      ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ಕುರಿತಂತೆ ಕೈ ನಾಯಕ ರಾಹುಲ್‍ಗಾಂಧಿ ಹಿಂದಿನಿಂದಲೂ ಪ್ರಸ್ತಾಪಿಸುತ್ತಾ ಬಂದಿದ್ದು, ಕೇಂದ್ರ ಸರಕಾರದ ಮಂತ್ರಿಗಳು, ಬಿಜೆಪಿ ನಾಯಕರು ಅವಹೇಳನ ಮಾಡುತ್ತಾ ಬಂದಿದ್ದರು. ಈಗ ಫ್ರಾನ್ಸ್ ನ್ಯಾಯಾಲಯವೇ ತನಿಖೆಗೆ ಆದೇಶಿಸಿರುವುದರಿಂದ ಜಾಗತಿಕವಾಗಿ ದೇಶದ ಮರ್ಯಾದೆ ಹರಜಾಗುವಂತಾಗಿದೆ. ಇದೇ ಬಿಜೆಪಿ ದುರಾಡಳಿತಕ್ಕೆ ಸಾಕ್ಷಿ. ಎಲ್ಲಾ ಹಂತದಲ್ಲೂ ವಿಫಲವಾಗಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಆರೋಪಿಸಿದರು.

ಬಿಜೆಪಿ ಸರಕಾರ ಸುಳ್ಳಿನ ಕಂತೆ: ಕೆ.ಎನ್‍ಆರ್ 

      ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಬಡವರ ಖಾತೆಗೆ 15 ಲಕ್ಷ ಹಣವನ್ನು ಹಾಕುತ್ತೇವೆಂದು ಹೇಳಿದ ಪ್ರಧಾನಿ ಮೋದಿ, ಬಿಜೆಪಿ ನಾಯಕರು ಅಧಿಕಾರಕ್ಕೆ ಬಂದು ಏಳು ವರ್ಷವಾದರೂ ಹಾಕುವಲ್ಲಿ ವಿಫಲರಾಗಿದ್ದಾರೆ. ಕೋವಿಡ್ ಅಲೆಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದ್ದು, ಈ ದುರಾಡಳಿತದ ಸರಕಾರವನ್ನು ಕೊನೆಗಾಣಿಸಿ ಕಾಂಗ್ರೆಸ್ ಸರಕಾರವನ್ನು ಅಸ್ಥಿತ್ವಕ್ಕೆ ತರುವ ಪ್ರಯತ್ನವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡಬೇಕಿದೆ. ಕೊರೊನಾ ಸಂದರ್ಭದಲ್ಲಿ ಕಾಂಗ್ರೆಸ್ ಹೆಚ್ಚಿನ ನೆರವಿನ ಹಸ್ತ ಚಾಚಿದೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link