ತುಮಕೂರು :
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಸನಿಹದಲ್ಲಿ ಪಂಚಾಯತ್ರಾಜ್ ಕಾಯ್ದೆ ತಿದ್ದುಪಡಿ ವಿದೇಯಕ ಅಂಗೀಕಾರಗೊಳಿಸಿದ ರಾಜ್ಯ ಸರಕಾರದ ನಡೆ ಸರಿಯಲ್ಲ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಖಂಡಿಸಿದರು.
ಪ್ರಜಾಪ್ರಗತಿಯೊಂದಿಗೆ ಶನಿವಾರ ಮಾತನಾಡಿದ ಅವರು ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಪುನರ್ವಿಂಗಡಣೆ, ಹೆಸರು ಬದಲಾವಣೆ ಮಾಡಲು ಅಧಿಕಾರವನ್ನು ತಿದ್ದುಪಡಿ ವಿದೇಯಕದ ಹೆಸರಲ್ಲಿ ಸರಕಾರವೇ ಪಡೆಯುವುದರ ಹಿಂದೆ ಆರ್ಎಸ್ಎಸ್ ಅಜೆಂಡಾ ಇದೆ. ಕ್ಷೇತ್ರಗಳ ಪುನರ್ರಚನೆ, ಹೆಸರು ಬದಲಾಯಿಸಿ ಆಕ್ಷೇತ್ರದಲ್ಲಿ ಹಿಂದೆ ಇದ್ದ ಮೀಸಲುಗಳನ್ನೇ ಜನರಿಂದ ಮರೆಮಾಚಿಸುವ ದುರುದ್ದೇಶ ಅಡಗಿದೆ. ಕ್ಷೇತ್ರಗಳ ಹೆಸರು ಒಮ್ಮೆ ಬದಲಾದರೆ ಯಾವ ವರ್ಗಕ್ಕೆ ಹಿಂದೆ ಮೀಸಲಾಗಿತ್ತೆಂಬುದೇ ಎಂಬ ಮಾಹಿತಿಯೂ ಕಡೆಗೆ ಜನರಿಗೆ ತಿಳಿಯದಂತಾಗಿ ಆಡಳಿತ ಸರಕಾರದ ಅನುಕೂಲಕ್ಕೆ ತಕ್ಕಂತೆ ಮೀಸಲು ಕಲ್ಪಿಸುವ ಗುಪ್ತ ಕಾರ್ಯಸೂಚಿ ಹೊಂದಲಾಗಿದೆ ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಸಾಮಾಜಿಕ ನ್ಯಾಯ ಕಾಪಾಡಬೇಕು, ಕ್ಷೇತ್ರ ವೈಜ್ಞಾನಿಕವಾಗಿ ವಿಂಗಡಣೆ ಮಾಡಬೇಕು ಎಂಬ ಸದುದ್ದೇಶ ಸರಕಾರಕ್ಕಿದ್ದರೆ ಚುನಾವಣೆ ಹತ್ತಿರದಲ್ಲೇ ಏಕೆ ಈ ನಿರ್ಧಾರ ಕೈಗೊಳ್ಳಬೇಕಿತ್ತು. ಸರಕಾರ ಬಂದ ಆರಂಭದಲ್ಲೇ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.
ಮದಲೂರು ಕೆರೆಗೆ ಹೇಮಾವತಿ ನೀರು ಅಲೋಕೇಷನ್ ಆಗಿದ್ದು, ಭದ್ರಾ ಮೇಲ್ದಂಡೆ ಯೋಜನೆಯಡಿಯೂ ನೀರು ಹರಿಯಲಿದೆ. ಮಾನವೀಯತೆ ದೃಷ್ಟಿಯಿಂದ ನೀರು ಹರಿಸಬೇಕಾಗಿದ್ದು, ಸರಕಾರದ ಕರ್ತವ್ಯವಾಗಿದ್ದು, ಅಲೋಕೇಷನ್, ರೀ ಅಲೋಕೇಷನ್ ಇವೆಲ್ಲವೂ ಆಡಳಿತದ ಕೈಯಲ್ಲೇ ಇದೆ ಎಂದು ಕೆಎನ್ಆರ್ ಪ್ರತಿಕ್ರಿಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
