ತುಮಕೂರು
ವಿಧಾನಸಭೆ ಕಲಾಪದಲ್ಲಿ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಅವರು ಕುಣಿಗಲ್ ಲಿಂಕ್ ಕೆನಾಲ್ ಯೋಜನೆ ಜಾರಿ ಬಗ್ಗೆ ಪ್ರಸ್ತಾಪಿಸಲು ಪದೇಪದೇ ಅವಕಾಶ ಕೋರಿದರೂ ಅದಕ್ಕೆ ಆಸ್ಪದವನ್ನೇ ಕೊಡದ ಸರಕಾರ, ಸ್ಪೀಕರ್ ಧೋರಣೆಯನ್ನು ಶಾಸಕರು ಖಂಡಿಸಿದ್ದಾರೆ.
ಸೆ.13 ರಿಂದ ಆರಂಭವಾದ ವಿಧಾನಮಂಡಲ ಅಧಿವೇಶನ 24 ಶುಕ್ರವಾರ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿತು. ಕಲಾಪದ ಅವಧಿಯಲ್ಲಿ ವಿಧಾನಸಭೆಯಲ್ಲಿ ಹೇಮಾವತಿ ಯೋಜನೆಯ ಟೈಲ್ಯಾಂಡ್ ಆದ ಕುಣಿಗಲ್ ತಾಲೂಕಿಗೆ ಸಮರ್ಪಕ ಹೇಮೆ ನೀರು ಹರಿಯದಿರುವ ಬಗ್ಗೆ, ಲಿಂಕ್ ಕೆನಾಲ್ ಅನ್ನು ನಿರ್ಮಿಸುವ ಕುರಿತಾಗಿ ನಾನು ಪದೇ ಪದೇ ಚರ್ಚೆಗೆ ಅವಕಾಶ ಕೋರಿದರೂ ನಿರಾಕರಿಸಿ ಯೋಜನೆ ಮರೆಮಾಚುವ ಯತ್ನವನ್ನು ಸರಕಾರ ಮಾಡಿದೆ. ಕಲಾಪದ ಕಡೇ ದಿನ ಈ ಸಂಬಂಧ ಭಿತ್ತಿ ಪತ್ರ ಹಿಡಿದು ಲಿಂಕ್ ಯೋಜನೆ ಜಾರಿಗಾಗಿ ಪ್ರತಿಭಟನೆ ನಡೆಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಹಿರಿಯ ಶಾಸಕರುಗಳು ಬೆಂಬಲ ನೀಡಿ ಧ್ವನಿ ಎತ್ತಿದರು. ಆದರೂ ಸರಕಾರ ಚರ್ಚೆಗೆ ಸಿದ್ದವಾಗಿರದೆ ಕಲಾಪವನ್ನೇ ಮುಂದೂಡಿಕೆ ಮಾಡಿತು ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬಿಜೆಪಿ ಸರಕಾರದ ಈ ನಡೆ ಖಂಡಿಸಿ ಮುಂದಿನ ದಿನಗಳಲ್ಲಿ ಜನರೊಡಗೂಡಿ ಹೋರಾಟ ಮಾಡುವುದಾಗಿ ಶಾಸಕರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ