ಕೊರೋನಾ ಪೀಡಿತರಿಗೆ 11 ಲಕ್ಷ ವೆಚ್ಚದ ಜೀವರಕ್ಷಕ ಔಷಧಿಗಳ ನೀಡಿಕೆ

 ತುರುವೇಕೆರೆ :  

      ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಜನತಾ ಕಫ್ರ್ಯೂ ಜಾರಿ ಮಾಡಿದ್ದು ಸರ್ಕಾರದ ಆದೇಶಗಳನ್ನು ಜನಸಾಮಾನ್ಯರು ಪಾಲಿಸುವ ಮೂಲಕ ಕೊರೋನಾ ಮಹಾಮಾರಿಯನ್ನು ತೊಲಗಿಸಲು ಎಲ್ಲಾರ ಸಂಕಲ್ಪ ಮಾಡಬೇಕಾಗಿದೆ. ಎಂದು ಶಾಸಕ ಮಸಾಲಜಯರಾಮ್ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

      ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೋನಾ ಪೀಡಿತರಿಗೆ ವಿತರಿಸಲು ಸುಮಾರು 11 ಲಕ್ಷ ರೂ.ವೆಚ್ಚದ ಜೀವರಕ್ಷಕ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ನೀಡಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು. ಅದರಂತೆ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯೂ ಕಾಣಬರುತ್ತಿರುವುದನ್ನು ಮನಗಂಡು ಮುಂಜಾಗ್ರತ ಕ್ರಮವಾಗಿ ತಮ್ಮ ಸ್ವಂತ ಹಣದಿಂದ ಸುಮಾರು 11 ಲಕ್ಷ.ರೂ.ಗಳ ತುಂಬಾ ಅವಶ್ಯಕವಿರುವ ದುಬಾರಿ ವೆಚ್ಚದ ಇಂಜಕ್ಷನ್‍ಗಳು, ಮಾತ್ರೆಗಳು, ಮೂರು ಪರದೆಯುಳ್ಳ ಹಾಗೂ ಎನ್.95 ಮಾಸ್ಕ್‍ಗಳು, ಸ್ಯಾನಿಟೈಸರ್, ಹಾಸಿಗೆ ದಿಂಬು ಕವರ್‍ಗಳು ಸೇರಿದಂತೆ ಜೀವರಕ್ಷಕ ಔಷಧಿಗಳನ್ನು ವಿತರಿಸಲು ವೈದ್ಯಾಧಿಕಾರಿಗಳಿಗೆ ತಲುಪಿಸಲಾಗಿದೆ.

      ಮುಂದೆಯೂ ಸಹಾ ಸಾರ್ವಜನಿಕರು ಕೊರೋನಾದಿಂದ ಮುಕ್ತರಾಗಲು ಜೀವರಕ್ಷಕ ಔಷಧಿಗಳ ಕೊರತೆಯಾದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸ್ವಂತ ಹಣದಿಂದ ನೀಡುವುದಾಗಿ ತಿಳಿಸಿದರಲ್ಲದೆ. ತಾಲ್ಲೂಕಿನ ಜನತೆಯ ಆರೋಗ್ಯ ದೃಷ್ಟಿಯಿಂದ ಯಾವುದೇ ಸಹಾಯ ನೀಡಲು ಬದ್ಧನಾಗಿದ್ದೇನೆ ಎಂದರಲ್ಲದೆ ಇಂದಿನಿಂದ ತಾಲ್ಲೂಕಿನಲ್ಲಿ ಜನತಾ ಕಫ್ರ್ಯೂ ಜಾರಿ ಮಾಡಲಾಗಿದೆ. ತಮ್ಮ ತಮ್ಮ ಆರೋಗ್ಯ ದೃಷ್ಟಿಯಿಂದ ಮನೆಯಿಂದ ಯಾರೂ ಹೊರಗಡೆ ಬರಬೇಡಿ, ಅಗತ್ಯ ವಸ್ತುಗಳನ್ನು ಕೊಳ್ಳುವಾಗ ವಾಹನ ಬಳಸದೆ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ಮೂಲಕ ವ್ಯವಹರಿಸಿ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ನೀಡುವ ಸೂಚನೆಗಳನ್ನು ತಪ್ಪದೆ ಪಾಲಿಸಿ ಎಲ್ಲೆ ಹೋದರೂ ಕೂಡ ಮಾಸ್ಕ್ ಧರಿಸಿ, ತಾಲ್ಲೂಕಿನಲ್ಲಿ ಕೊರೋನಾ ಹಾಟ್ ಸ್ಪಾಟ್ ಗ್ರಾಮಗಳಲ್ಲಿ ಪಿ.ಡಿ.ಓ. ಗಳು ಹೆಚ್ಚು ಶ್ರಮವಹಿಸಿ. ಹೊರಗಿನಿಂದ ಬಂದವರು ಮನೆಯಿಂದ ಹೊರಬಾರದಂತೆ ಗ್ರಾಮಗಳಲ್ಲಿ ಯುವಕರು ಜಾಗರೂಕತೆ ವಹಿಸುವುದು ಸೂಕ್ತ ಎಂದರು.

      ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಪ್ರಿಯಾ, ವೈದ್ಯಾಧಿಕಾರಿ ಡಾ.ಶ್ರೀಧರ್, ಡಾ.ನವೀನ್, ಡಾ.ಪವನ್, ಪಪಂ ಅಧ್ಯಕ್ಷ ಅಂಜನ್ ಕುಮಾರ್, ಸದಸ್ಯ ಚಿದಾನಂದ್, ಎಪಿಎಂಸಿ ಸದಸ್ಯ ವಿ.ಟಿ.ವೆಂಕಟರಾಮು, ಮುಖಂಡರಾದ ಕೊಂಡಜ್ಜಿ ವಿಶ್ವಣ್ಣ, ವಿ.ಬಿ.ಸುರೇಶ್, ವಕೀಲ ಮುದ್ದೇಗೌಡ, ಕಾಳಂಜೀಹಳ್ಳಿ ಸೋಮು, ಬೋರೇಗೌಡ, ಸಾಗರ್ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link