ವಾಟ್ಸಪ್ ಅಡ್ಮಿನ್ ಗಳಿಗೆ ಆಯೋಗದ ಎಚ್ಚರಿಕೆ….!

ಕೊಡಗು : 

   ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆ ಡೇಟ್‌ ಫಿಕ್ಸ್‌ ಆದ ಬೆನ್ನಲ್ಲೆ ಚುಣಾವಣಾ ನೀತಿ ಸಂಹಿತೆ ಜಾರಿಯಾಗಿದ್ದು ವಾಟ್ಸಪ್ ಮೂಲಕ ಮತದಾರರ ಸೆಳೆಯೋದಕ್ಕೆ ರಣತಂತ್ರ ರೂಪಿಸುವವರಿಗೆ ಚುನಾವಣಾ ಆಯೋಗ ಎಚ್ಚರಿಕೆ ಸಂದೇಶ ರವಾನಿಸಿದೆ.

     ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಆಯೋಗ ಅಗತ್ಯ ಕ್ರಮಗಳನ್ನು ಕೈಗೊಂಡಿದೆ . ಚುನಾವಣೆ ಡೇಟ್‌ ಫಿಕ್ಸ್‌ ಆದ ಬೆನ್ನಲ್ಲೆ ರಾಜ್ಯದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಸಂದೇಶಗಳನ್ನು ರವಾನಿಸುವ ವಾಟ್ಸಾಪ್​ ಗ್ರೂಪ್​ ಅಡ್ಮಿನ್​ ವಿರುದ್ಧ ಕಠಿಣ ಕ್ರಮಕೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಈಗಾಗಲೇ ಎಚ್ಚರಿಕೆ ನೀಡಿದೆ .

    ಈ ಕಾರಣದಿಂದಾಗಿ ಕೊಡಗಿನಲ್ಲಿ ಗ್ರೂಪ್ ಅಡ್ಮಿನ್ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಅಡ್ಮಿನ್‌ಗಳು ಆತಂಕಕ್ಕೆ ಒಳಗಾಗಿದ್ದು, ಇಂತಹ ಸಂದೇಶಗಳಿಂದ ದೂರವಿರುವಂತೆ ಆಯಾ ಗುಂಪಿನ ಸದಸ್ಯರಿಗೆ ಅಡ್ಮಿನ್‌ಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇನ್ಮುಂದೆ ಚುನಾವಣೆ ಮುಗಿಯುವ ತನಕ ಮತದಾರರ ಸೆಳೆಯೋದಕ್ಕೆ ವಾಟ್ಸಪ್‌ ಆಪ್‌ ಮೂಲಕ ಯಾವುದೇ ಸಂದೇಶಗಳನ್ನು ಹಂಚಿಕೊಳ್ಳಬೇಡಿ, ಕೇಸ್‌ ಬೀಳುವ ಸಾಧ್ಯತೆಯಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap