ನಿಟ್ಟೂರು:
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಕೆರೆ-ಕಟ್ಟೆಗಳು ಮಳೆಯಿಂದಾಗಿ ತುಂಬಿ ತುಳುಕುತ್ತಿವೆ. ಪುರದ ಕೆರೆ, ನಿಟ್ಟೂರು ಕೆರೆ, ಇತರೆ ಹಳ್ಳ, ಕೊಳ್ಳಗಳು ತುಂಬಿದ್ದು ಮಕ್ಕಳು, ಯುವ ಜನರು, ಕೆರೆ ನೋಡಲು, ಈಜಾಡಲು ಹೋಗುತ್ತಿದ್ದಾರೆ. ಮನೆಯಲ್ಲಿ ಗೊತ್ತಾದರೆ ಬೈಯ್ಯುತ್ತಾರೆ. ಎಂದು ಬಹಳಷ್ಟು ಜನ ಹುಡುಗರು ತಮ್ಮ ಪೋಷಕರುಗಳಿಗೆ ವಿಷಯ ತಿಳಿದೆ ಕೆರೆಗಳ ಕಡೆ ಹೋಗುತ್ತಿದ್ದಾರೆ.
ಕೆರೆಯ ಬಳಿ ಹೋಗಿ ಸೆಲ್ಫಿ ತೆಗೆದುಕೊಳ್ಳುವುದು, ಕೋಡಿ ಹರಿಯುತ್ತಿರುವ ನೀರಿಗೆ ಇಳಿಯುವುದು, ಮೀನು ಹಿಡಿಯಲು ಹೋಗುವುದು, ನೀರಿನೊಂದಿಗೆ ಚೆಲ್ಲಾಟವಾಡುವುದು, ಹೀಗೆ ನಾನಾ ತರಹದ ದುಸ್ಸಾಹಸದಲ್ಲಿ ತೊಡಗುತ್ತಾರೆ. ನೀರಿನ ಭೀತಿಯ ಅರಿವಿಲ್ಲದ ಎಳೆಯರು, ಹುಮ್ಮಸ್ಸಿನಿಂದ ಆಟವಾಡಲ
ಗ್ರಾಮದ ಕೆರೆಯು ಮಳೆ ನೀರಿನಿಂದ ಆವೃತ್ತವಾಗಿದ್ದು, ಪುರದಕೆರೆಗೆ ಹಾದು ಹೋಗಿರುವ ಹೇಮಾವತಿ ಕಾಲುವೆಯೂ ಸಹ ನೀರಿನಿಂದ ತುಂಬಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಮೇಲೆ ತೀವ್ರ ನಿಗಾವಹಿಸಲು ನಿಟ್ಟೂರು ಗ್ರಾಪಂ ಮನವಿ ಮಾಡಿದ್ದು, ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ಹರಿಯುವ ನೀರಿನಲ್ಲಿ ಆಟವಾಡಲು ಬಿಡಬಾರದು. ಹಲವೆಡೆ ನೀರಿನ ರಭಸಕ್ಕೆ ಅನೇಕ ಮಂದಿ ಕೊಚ್ಚಿ ಹೋಗಿರುವ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. ಆದ್ದರಿಂದ ಮಕ್ಕಳ ಮೇಲೆ ಪೋಷಕರು ನಿಗಾ ವಹಿಸುವುದು ಅಗತ್ಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/11/Pravaha.jpg)