ಜಯಸುಧಾ ಮತಾಂತರಕ್ಕೆ ಕಾರಣ ಏನು ಗೊತ್ತಾ…..?

ಹೈದರಾಬಾದ್​: 

     ಟಾಲಿವುಡ್​ನ ಖ್ಯಾತ​ ಹಿರಿಯ ನಟಿ ಜಯಸುಧಾ ಅವರು ಕನ್ನಡಿಗರಿಗೂ ಪರಿಚಿತ. ಸಾಹಸಸಿಂಹ ವಿಷ್ಣುವರ್ಧನ್​ ಅಭಿನಯದ ನೀ ತಂದ ಕಾಣಿಕೆ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಆ ಚಿತ್ರದ ‘ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ’ ಇಂದಿಗೂ ಅನೇಕ ಬಾಯಲ್ಲಿ ಗುನುಗುತ್ತಿರುತ್ತದೆ.

    ಇನ್ನು ನಟ ಶಿವರಾಜ್​ ಕುಮಾರ್​ ಅಭಿನಯದ ವಜ್ರಕಾಯ ಸಿನಿಮಾದಲ್ಲಿ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ತಾಯಿಯ ಮಡಿಲು ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ನಟಿಸಿದ್ದು ಕೆಲವೇ ಸಿನಿಮಾಗಳಾದರೂ ಕನ್ನಡಿಗರಿಗೆ ಇವರ ಪರಿಚಯ ಇದೆ.

    ಸರಿ ಇವಾಗ ಅವರ ಪರಿಚಯದ ಅಗತ್ಯವೇನು? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು, ಅದಕ್ಕೆ ಉತ್ತರ ಮುಂದಿದೆ ಓದಿ… ಜಯಸುಧಾ ಅವರು ಹಿಂದು ಧರ್ಮವನ್ನು ಬಿಟ್ಟು ಅನ್ಯ ಧರ್ಮವನ್ನು ಸ್ವೀಕರಿಸಿರುವುದರ ಹಿಂದಿನ ಕಾರಣ ಬಹಿರಂಗವಾಗಿದ್ದು, ಈ ಸಂಗತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

   ಜಯಸುಧಾ ಅವರು 1985ರಲ್ಲಿ ನಿತಿನ್ ಕಪೂರ್ ಎಂಬುವರನ್ನು ವಿವಾಹವಾದರು. ಅವರು ಹನಿಮೂನ್‌ಗಾಗಿ ಥೈಲ್ಯಾಂಡ್‌ಗೆ ಹೋದಾಗ ಸಂಭವಿಸಿದ ಘಟನೆಯೊಂದು ತನ್ನ ಧರ್ಮವನ್ನು ಬದಲಾಯಿಸಲು ಪ್ರೇರೇಪಿಸಿತು ಎಂದು ಹೇಳಿದ್ದಾರೆ. ನಾವು ಬ್ಯಾಂಕಾಕ್‌ನ ರೆಸಾರ್ಟ್‌ಗೆ ಹೋಗಿದ್ದೆವು. ನನಗೆ ನೀರು ಕಂಡರೆ ಭಯ ಮತ್ತು ಈಜುವುದು ಗೊತ್ತಿರಲಿಲ್ಲ.

    ನಾನು ಯಾವಾಗಲೂ ಸಮುದ್ರದಿಂದ ದೂರವಿರಲು ಪ್ರಯತ್ನಿಸುತ್ತೇನೆ. ಆದರೆ, ಅದೊಂದು ಬೀಚ್ ರೆಸಾರ್ಟ್ ಆಗಿತ್ತು. ನನ್ನ ಪತಿ ನನ್ನನ್ನು ನೀರಿನಲ್ಲಿ ಆಟವಾಡುವಂತೆ ಒತ್ತಾಯಿಸಿದರು. ನಾನು ನೋಡಿಕೊಂಡೇ ಇರುತ್ತೇನೆ ಮತ್ತು ನೀರಿನಲ್ಲಿ ಆಟವಾಡಲು ನನಗೆ ಇಷ್ಟವಿಲ್ಲ ಹಾಗೂ ಭಾಗವಹಿಸಲು ಸಿದ್ಧಳಿಲ್ಲ ಎಂದು ಹೇಳಿದೆ. ಬಳಿಕ ನನ್ನ ಪತಿ ಎಲ್ಲ ಸವಾರಿಗಳನ್ನು ಆನಂದಿಸಿದರು.

    ಹನಿಮೂನ್​ ಕೊನೆಯ ದಿನ, ನನ್ನ ಪತಿ ನನ್ನೊಂದಿಗೆ ಕನಿಷ್ಠ ಒಂದು ಸಮುದ್ರ ಚಟುವಟಿಕೆಯಲ್ಲಾದರೂ ಭಾಗವಹಿಸಲು ಮನವಿ ಮಾಡಿಕೊಂಡರು. ನಾನು ನಿನ್ನ ಜತೆಯಲ್ಲೇ ಇರುತ್ತೇನೆ ಎಂದು ಭರವಸೆ ನೀಡಿದರು. ಭಯಪಡಬೇಡಿ ಮತ್ತು ಎಲ್ಲವೂ ಚೆನ್ನಾಗಿರುತ್ತದೆ ಎಂದು ಹೇಳಿ, ಮನವರಿಕೆ ಮಾಡಿದರು. ನಮ್ಮ ಹನಿಮೂನ್ ಆಗಿದ್ದರಿಂದ ನನ್ನ ಪತಿಯನ್ನು ನಿರಾಶೆಗೊಳಿಸಲು ನಾನು ಬಯಸಲಿಲ್ಲ. ಆದ್ದರಿಂದ, ಜೆಟ್ ಸ್ಕೈಯಿಂಗಾಗಿ ಅವರೊಂದಿಗೆ ಹೋದೆ. ನಾನು ಕಣ್ಣು ಮುಚ್ಚಿದೆ. ಕೆಲವು ನಿಮಿಷಗಳ ಕಾಲ ಸಮುದ್ರ ಶಾಂತವಾಗಿತ್ತು. ಆದರೆ, ಸ್ವಲ್ಪ ದೂರ ಹೋದ ನಂತರ ಎಲ್ಲವೂ ಬದಲಾಯಿತು. ನಾನು ನನ್ನ ಸಮತೋಲನವನ್ನು ಕಳೆದುಕೊಂಡು ಸಮುದ್ರಕ್ಕೆ ಬಿದ್ದೆ. ನನಗೆ ಈಜು ಗೊತ್ತಿಲ್ಲದ ಕಾರಣ ಇದು ನನ್ನ ಜೀವನದ ಅಂತ್ಯ ಎಂದು ನಾನು ಭಾವಿಸಿದೆ.

    ನಾನು ನೀರಿಗೆ ಬಿದ್ದಾಗ, ಸಾಯುತ್ತಿದ್ದೇನೆ ಎಂದು ಭಾವಿಸಿದೆ. ಹಿಂದು ಆಗಿರುವ ನಾನು ನನ್ನ ದೇವರುಗಳ ಹೆಸರನ್ನು ಕರೆದು ಅಳಬೇಕಿತ್ತು ಆದರೆ, ನಾನು ಯೇಸು ಕ್ರಿಸ್ತನನ್ನು ಕರೆದು ಅಳುತ್ತಿದ್ದೆ. ನಾನು ಮುಳುಗಲು ಪ್ರಾರಂಭಿಸಿದಾಗ, ನನ್ನ ಉಸಿರನ್ನು ಬಿಗಿಹಿಡಿದ ನಂತರ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ನಂತರ ಕಣ್ಣು ತೆರೆದಾಗ, ಎಡ ಮತ್ತು ಬಲಭಾಗದಲ್ಲಿ ನಿಧಾನವಾಗಿ ಹರಿಯುವ ಕಡಲಕಳೆ ಮತ್ತು ಸೂರ್ಯನ ಕಿರಣಗಳನ್ನು ನೋಡಿದೆ ಮತ್ತು ಸೂರ್ಯನ ಕಿರಣಗಳ ಹಿಂದೆ ಜೀಸಸ್ ಇರುವಂತೆ ಭಾಸವಾಯಿತು. ನಾನು ಬೇರೆ ಧರ್ಮಕ್ಕೆ ಬದಲಾಗಲು ಇದೇ ಘಟನೆ ಕಾರಣ ಎಂದು ನಟಿ ಸ್ಪಷ್ಟನೆ ನೀಡಿದ್ದಾರೆ.

    ಜಯಸುಧಾ ಅವರು ಮೊದಲು ಕಾಕರ್ಲಪುಡಿ ಮೂಲದ ಉದ್ಯಮಿ ರಾಜೇಂದ್ರ ಪ್ರಸಾದ್​ ಎಂಬುವರನ್ನು ಮದುವೆ ಆಗಿದ್ದರು. ಆದರೆ, ಭಿನ್ನಾಭಿಪ್ರಾಯಗಳಿಂದ ಇಬ್ಬರು ದೂರ ಆದರು. ಇದಾದ ಬಳಿಕ ಬಾಲಿವುಡ್‌ನ ಜಿತೇಂದ್ರ ಕಪೂರ್ ಸೋದರಸಂಬಂಧಿ ನಿತಿನ್ ಕಪೂರ್ ಅವರನ್ನು ವಿವಾಹವಾದರು. ಎರಡನೇ ಗಂಡ 2017ರಲ್ಲಿ ಅಸುನೀಗಿದರು. ಮಾನಸಿಕ ತೊಂದರೆಯಿಂದ ಆತ್ಮಹತ್ಯೆ ಮಾಡಿಕೊಂಡರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap