ನಿರ್ಮಲ್
ನಗರದಲ್ಲಿ ರ್ಯಾಲಿ ರದ್ದು ಮಾಡಿದರೆ ನಮಗೆ ರೂ.25 ಲಕ್ಷ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು ಎಂದು ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ.
ಕಾರ್ಯಕ್ರಮೊಂದರಲ್ಲಿ ಮಾತನಾಡಿರುವ ಅವರು, ನಿರ್ಮಲ್ ನಲ್ಲಿ ಸಾಹಿಕ ಜಾಥಾ ರದ್ದು ಮಾಡಲು ಕಾಂಗ್ರೆಸ್ ರೂ.25 ಲಕ್ಷ ಕೊಡುವುದಾಗಿ ತಿಳಿಸಿತ್ತು ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ . ನೀವು ನಮಗೇನು ಕೊಡುತ್ತೀರಿ? ನಾವು ತಾಜ್ ಮಹಲ್ ನಿರ್ಮಿಸಿದೆವು. ಆ ಆಸ್ತಿಯನ್ನು ನೀವು ಕೊಡುತ್ತೀರಾ? ಕಾಂಗ್ರೆಸ್ ನಾಯಕರಂತೆ ನಾನಲ್ಲ. ನನ್ನದನ್ನು ನಾನು ಎಂದಿಗೂ ಮಾರುವುದಿಲ್ಲ. ನನ್ನ ಜನರ ಹಿತಾಸಕ್ತಿಗಾಗಿ ದುಡಿಯುವುದನ್ನು ನಾನು ನಂಬಿದ್ದೇನೆಂದು ಹೇಳಿದ್ದಾರೆ.
ಭಾರತ ದೇಶದ ಪ್ರತೀ ಮೂಲೆಯಲ್ಲೂ ನಮ್ಮ ಧ್ವಜ ಹಾರಾಡುವುದನ್ನು ನಾನು ನೋಡಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ . ದೇಶದ ಪ್ರತೀ ಮೂಲೆಯಲ್ಲಿರುವ ಯುವಕರ ಅಭಿವೃದ್ಧಿ, ಪ್ರಗತಿ ನೋಡಲು ಇಚ್ಛಿಸುತ್ತೇನೆ. ನಾನು ಇಲ್ಲಿಗೆ ಬಂದಾಗ ನನ್ನನ್ನು ನೋಡಲು ಇಲ್ಲಿಗೆ ಬಂದಿರುವ ನೂರಾರು ಸಂಖ್ಯೆಯ ಯುವಕರಿಗೆ ನಾನು ಸೆಲ್ಯೂಟ್ ಹೊಡೆಯುತ್ತೇನೆ. ಈ ರೀತಿಯ ಶಕ್ತಿ ನೋಡಲು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ