ಪಾವಗಡ;-
ಮನುಷನಿಗೆ ಆರೋಗ್ಯವಾಗಿರಲು ಉತ್ತಮ ಆಹಾರವನ್ನು ಸೇವಿಸಬೇಕು,ಇಂದಿನ ಆಹಾರ ಪದ್ದತಿಯಿಂದಲೇ ಮನುಷ್ಯನು ರೋಗಗಳಿಂದ ಬಲಿಯಾಗುತ್ತಿದ್ದಾನೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಗಾಯಿತ್ರಿಬಾಯಿ ತಿಳಿಸಿದರು.
ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಹಾಗೂ ಬ್ರೈಟ್ ಪ್ಯೂಚರ್ ವುಮೆನ್ಸ್ ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಪೌಂಡೇಷನ್(ರಿ) ಪಾವಗಡ, ಹಾಗೂ ಪಾವಗಡ ರೂರಲ್ ರೊಪ್ಪ ಗ್ರಾಮ ಪಂಚಾಯಿತಿ ಮತ್ತು ತಾ.ಪಂ, ಜಿ.ಪಂ ಸದಸ್ಯರು ಹಾಗೂ ರೊಪ್ಪ ಗ್ರಾಮಸ್ಥರ ಸಹಕಾರದಿಂದ ಸಹಯೋಗದಲ್ಲಿ ಭಾನುವಾರ ರೊಪ್ಪ ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಮತ್ತು ಸಂಘ ಸಂಸ್ಥೆಗಳು ಇಂತಹ ಆರೋಗ್ಯ ಏರ್ಪಡಿಸುವುದರಿಂದ ಕಡ ಬಡವರಿಗೆ ಅನುಕೂಲವಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷಣಿ ನಾಗಮಣಿಮೂರ್ತಿ ಮಾತನಾಡಿ ಗ್ರಾಮಾಂತರ ಪ್ರದೇಶಗಲಲಲ್ಲಿ ಆರೋಗ್ಯ ಶಿಬರಗಳನ್ನು ಏರ್ಪಡಿಸುವುದರಿಂದ ರೋಗಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕ್ಸಿತೆ ನೀಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದರು.
ಸಪ್ತಗಿರಿ ಆಸ್ವತ್ರೆಯ ರವಿ ಮಾತನಾಡಿ ಶಿಬರದಲ್ಲಿ ರೋಗಗಳನ್ನು ಪರೀಕ್ಷಿಸಿ ಉಚಿತವಾಗಿ ಔಷದಿಗಳನ್ನು ನೀಡಲಾಗುತ್ತಿದ್ದು,ಅವಶ್ಯ ಇರುವ ಶಸ್ತ್ರ ಚಿಕ್ಸೆತೆಗೆ ಆಯ್ಕೆ ಅಗಿರುವ ರೋಗಿಗಳಿಗೆ ಉಚಿತವಾಗಿ ಶಸ್ರ್ತ ಚಿಕ್ಸಿತೆಯನ್ನು ನೀಡಲಾಗುವುದೆಂದರು.
ಈ ಶಿಬಿರದಲ್ಲಿ ತಙ್ಞ ವೈದ್ಯರಿಂದ ಹೃದಯ ರೋಗ,
ಸ್ರೀ ರೋಗ ಮತ್ತು ಪ್ರಸೂತಿ, ಮತ್ತು ಮಕ್ಕಳ ಮೂಳೆ ಮತ್ತು ಕೀಲು, ರೋಗ, ತಪಾಸಣೆ. ಚರ್ಮ ರೋಗ, ಮೂತ್ರ ಪಿಂಡ, ಕಣ್ಣು, ಮೂಗು, ಕಿವಿ ಹಾಗೂ ಸಾಮಾನ್ಯ ರೋಗಿಗಳಿಗೆ ಒಳಪಟ್ಟ 500 ಜನ ಹೆಚ್ಚಿನ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನಾ ಕಾರ್ಯಾದರ್ಶಿ ಸುಶೀಲಮ್ಮ,ಬ್ರೈಟ್ ಫ್ಯೂಚರ್ ವುಮೆನ್ಸ್ ಇನ್ಟಿಗ್ರೇಟೆಡ್ ಡೆವಲಪ್ಮೆಂಟ್ ಫೌಡೇಶನ್ ಸಿ.ಓ ಸುಮಾಶ್ರೀಧರ್ ಗುಪ್ತ,ರಾಘವೇಂದ್ರ,ಧಾನ್ ಪೌಂಡೇಶನ್ ವೀರಭದ್ರಪ್ಪ,ಗ್ರಾ.ಪಂ.ಸದಸ್ಯರಾದ ನಾಗರಾಜನಾಯ್ಕ, ಪೆದ್ದಣ್ಣ, ಶಾಂತಮ್ಮರಾಜುನಾಯ್ಕ, ಶಿವಮ್ಮಹನುಮಂತರಾಯಪ್ಪ, ನಾಗಮ್ಮವೆಂಕಟರವಣಸ್ವಾಮಿ,ಅಮೀರಿಶ್,ರಂಗಪ್ಪ ಗ್ರಾ.ಪಂ.ನೌಕರರಾದ ಗೋಪಾಲ್,ಸದಾ, ರಮೇಶ್, ರಾಮಪ್ಪ, ಸಂಜೀವಪ್ಪ,ಸುಬ್ಬಮ್ಮ, ಬೀಮಪ್ಪ ಹಾಗೂ ಗ್ರಾಮಸ್ಥರು ಹಾಜರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
