ಎಸ್ ಯು ಸಿ ಐ ಅಭ್ಯರ್ಥಿಯಿಂದ ಮತ ಬೇಟೆ

ಬಳ್ಳಾರಿ:

      ಇಂದುಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದಅಭ್ಯರ್ಥಿಎ.ದೇವದಾಸ್‍ಅವರು ಪ್ರಮುಖ ಬೀದಿಗಳಲ್ಲಿ ಮತಯಾಚನೆ ಮಾಡುತ್ತಾ, ರೋಡ್ ಶೋ ನಡೆಸಿದರು. ತೆರದ ವಾಹನದಲ್ಲಿ ಸಂಚರಿಸಿದ ಎ.ದೇವದಾಸ್ ನಗರದ ಬೆಂಗಳೂರು ರಸ್ತೆ, ತೇರು ಬೀದಿ, ಕಣೆಕಲ್ ಬಸ್ ಸ್ಟ್ಯಾಂಡ್, ಕಾಳಮ್ಮ ಬೀದಿ, ಮೋತಿ ಸರ್ಕಲ್ ಬಳಿಯಿದ್ದ ಜನರಿಗೆ ನಮಸ್ಕರಿಸುತ್ತಾ, ಎಸ್.ಯು.ಸಿ.ಐ(ಸಿ) ಪಕ್ಷಕ್ಕೆ ಮತ ಹಾಕಲು ಮನವಿ ಮಾಡಿದರು.

      ಬಳ್ಳಾರಿಯ ಜನತೆಸಹ ಎ.ದೇವದಾಸ್‍ಅವರು ಆಗಮಿಸಿದ ಕೂಡಲೇಅತ್ಯಂತಗೌರವಪೂರ್ಣವಾಗಿ ವಂದನೆಯನ್ನು ಸ್ವೀಕರಿಸಿದರು ಹಾಗೂ ತುಂಬು ಮನಸ್ಸಿನಿಂದ ಸ್ಪಂದಿಸಿದರು.ಈ ಸಂದರ್ಭದಲ್ಲಿ ಪಕ್ಷದರಾಜ್ಯ ಸಮಿತಿಯ ಸದಸ್ಯರಾದ ಕೆ.ಸೋಮಶೇಖರ್, ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣಉಪಾಧ್ಯ ಉಪಸ್ಥಿತರಿದ್ದರು.

         ಕೆಲವು ಮುಖ್ಯ ರಸ್ತೆಗಳಲ್ಲಿ ಜನರನ್ನುದ್ದೇಶಿಸಿ ಕೆ.ಸೋಮಶೇಖರ್ ಮಾತನಾಡುತ್ತಾ“ ಇಂದುಮೋದಿ ಸರ್ಕಾರ ಜಾರಿಗೆ ತಂದ ಜಿಎಸ್‍ಟಿ ಯಿಂದಾಗಿ ಸಣ್ಣ ವ್ಯಾಪಾರಸ್ಥರುಅತ್ಯಂತ ಸಂಕಷ್ಟ ಅನುಭವಿಸಿದ್ದಾರೆ. ದುಡಿದೆದ್ದೆಲ್ಲತೆರಿಗೆಕಟ್ಟುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ದೇಶದಲ್ಲಿ ಲಕ್ಷಾಂತರ ಸಣ್ಣ ಉದ್ಯಮಗಳು ಜಿಎಸ್‍ಟಿಯಿಂದಾಗಿ ಮುಚ್ಚಿ ಹೋಗಿವೆ. ಬಳ್ಳಾರಿಯಲ್ಲೇ ನೂರಾರುಜೀನ್ಸ್ ಸಣ್ಣ ಕೈಗಾರಿಕೆಗಳು ಮುಚ್ಚಿ, ಸಾವಿರಾರುಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ.

        ಇನ್ನೊಂದೆಡೆ ತೆರಿಗೆಯ ಭಾರದಿಂದಗ್ರಾಹಕರು ತತ್ತರಿಸಿಹೋಗಿದ್ದಾರೆ.ಜಿಎಸ್‍ಟಿದೊಡ್ಡದೊಡ್ಡ ಉದ್ಯಮಿಗಳಾದ ಅಂಬಾನಿ, ಅದಾನಿ ಅಂತವರಿಗೆ ಸಹಾಯವಾಗಿದೆ. ಮತ್ತೊಂದೆಡೆ ನೋಟ್ ಬ್ಯಾನ್‍ಕೂಡ ಸಣ್ಣ ವ್ಯಾಪಾರಸ್ಥರು ಸೇರಿದಂತೆರೈತರು, ಕಾರ್ಮಿಕರು, ಜನಸಾಮಾನ್ಯರು ಬೀದಿಗೆ ಬೀಳುವಂತೆ ಮಾಡಿತು.ಚಿಲ್ಲರೆಮಾರುಕಟ್ಟೆಯಲ್ಲಿಎಫ್‍ಡಿಐವಿರುದ್ಧಧ್ವನಿ ಎತ್ತಿದ್ದ ಬಿಜೆಪಿ, ತಾನುಅಧಿಕಾರಕ್ಕೆ ಬಂದ ಮೇಲೆ ಎಫ್‍ಡಿಐಜಾರಿಗೆತಂದಿತು.

        ಕಾಂಗ್ರೆಸ್ ಪಕ್ಷಕೂಡಅಧಿಕಾರದಲ್ಲಿದ್ದಾಗ ಬೆಲೆ ಏರಿಕೆ ಮಾಡಿತು, ಭ್ರಷ್ಟಾಚಾರ ಹಗರಣಗಳಲ್ಲಿ ತೊಡಗಿತ್ತು.ಬಿಜೆಪಿ ಹಾಗೂ ಕಾಂಗ್ರೆಸ್‍ಜನದ್ರೋಹಿ ಪಕ್ಷಗಳು. ಇವುಗಳನ್ನು ತಿರಸ್ಕರಿಸಿ ಜನರಧ್ವನಿಯನ್ನು ಪಾರ್ಲಿಮೆಂಟ್‍ನಲ್ಲಿಎತ್ತಿ ಹಿಡಿಯುವ ಎಸ್.ಯು.ಸಿ.ಐ(ಸಿ) ಪಕ್ಷಕ್ಕೆ ಮತ ಹಾಕಬೇಕು. ಟ್ರ್ಯಾಕ್ಟರ್‍ಗುರುತಿಗೆ ಮತ ಹಾಕಬೇಕೆಂದು” ಮನವಿ ಮಾಡಿದರು.ಎಂ.ಎನ್ ಮಂಜುಳಾ, ಡಾ.ಪ್ರಮೋದ್, ಸೋಮಶೇಖರಗೌಡ, ಶಾಂತಾ, ಹನುಮಪ್ಪ, ಗೋವಿಂದ್, ನಾಗರತ್ನ, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link