ಡಾ. ಜಿ. ಪರಮೇಶ್ವರಗೆ ಗೃಹ ಖಾತೆ ತಪ್ಪಿದ್ದಕ್ಕೆ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ

ಕಂಪ್ಲಿ

         ಡಾ.ಜಿ.ಪರಮೇಶ್ವರರನ್ನು ಹಂತ ಹಂತವಾಗಿ ಅಧಿಕಾರದಿಂದ ದೂರ ಇರಿಸುವ ಪ್ರಯತ್ನ ರಾಜ್ಯ ರಾಜಕಾರಣದಲ್ಲಿ ಮುಂದುವರೆದಿದ್ದು ದಲಿತ ನಾಯಕರನ್ನು ಕಾಂಗ್ರೇಸ್ ಪಕ್ಷ ಅಧಿಕಾರ ಕಿತ್ತುಕೊಂಡು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಇದು ದಲಿತ ಸಮುದಾಯಕ್ಕೆ ಮಾಡುತ್ತಿರುವ ದ್ರೋಹ ಎಂದು ದಲಿತ ಪರ ಒಕ್ಕೂಟದ ಸದಸ್ಯರು ಇಂದು ಆಕ್ರೋಷ ವ್ಯಕ್ತಪಡಿಸಿದರು. ಅವರು ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಟೈರ್‍ಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟಿಸಿ ಪರಮೇಶ್ವರರಿಗೆ ಪನಃ ಗೃಹ ಖಾತೆ ನೀಡಬೇಕೆಂದು ಕಾಂಗ್ರೇಸ್‍ನ್ನು ಒತ್ತಾಯಿಸಿದರು.

           ಈ ಸಂದರ್ಭದಲ್ಲಿ ದಲಿತ ಮುಖಂಡ ಜಿ.ರಾಮಣ್ಣ ಮಾತನಾಡಿ ಕಾಂಗ್ರೇಸ್ ಪಕ್ಷ ತನ್ನ ಏಳಿಗೆಗಾಗಿ ಇದುವರೆಗೂ ದಲಿತ ಸಮುದಾಯವನ್ನು ಉಪಯೋಗಿಸಿಕೊಂಡಿದೆ. ದಲಿತರು ಸ್ವತಂತ್ರ ಬಂದಾಗಿನಿಂದಲೂ ಕಾಂಗ್ರೇಸ್ ಪರ ನಿಂತಿದ್ದಾರೆ. ದಲಿತ ನಾಯಕರು ಇಷ್ಟೊತ್ತಿಗಾಗಲೆ ಮುಖ್ಯಮಂತ್ರಿಗಳಾಗಬೇಕಿತ್ತು. ಆದರೆ ಜಾತಿ ರಾಜಕಾರಣ ಮಾಡುವ ಕೆಲ ಮೇಲ್ವರ್ಗದ ಕಾಂಗ್ರೇಸ್ಸಿಗರು ದಲಿತರನ್ನು ರಾಜಕಾರದಲ್ಲಿ ತುಳಿಯುತ್ತಿರುವುದು ಸಂವಿಧಾನ ಬಾಹಿರ.

            ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಬಹುಮತದಿಂದ ಕಾಂಗ್ರೇಸ್‍ನ್ನು ಗೆಲ್ಲಿಸಿಕೊಂಡು ಅಧಿಕಾರ ಗದ್ದುಗಿಗೆ ಅಣಿಯಾದ ಮಲ್ಲಿಕಾರ್ಜುನ ಖರ್ಗೆಗೆ ಸಿ.ಎಂ ಸ್ಥಾನ ಕೊಡಬೇಕತ್ತು. ಆದರೆ ಆವತ್ತು ಧರ್ಮಸಿಂಗ್‍ರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿ ಬಹುಸಂಖ್ಯಾರಾದ ದಲಿತ ಮುಖಂಡ, ಮುತ್ಸದ್ದಿ ರಾಜಕಾರಣಿ ಖರ್ಗೆಯವರನ್ನು ಜಾತಿ ಕಾರಣಕ್ಕಾಗಿ ಹತ್ತಿಕ್ಕಲಾಯಿತು. ಅದೇ ರೀತಿ ಪರಮೇಶ್ವರಪ್ಪರನ್ನೂ ಮುಖ್ಯಮಂತ್ರಿ ಆಗುವ ಸಂದರ್ಭದಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ಸಿಗರೆ ಸೋಲಿಸುವ ಮೂಲಕ ಸಿದ್ದರಾಮಯ್ಯಗೆ ಸಿ.ಎಂ ಪಟ್ಟ ಕಟ್ಟಿ ಪರಮೇಶ್ವರಪ್ಪರನ್ನು ಖಾಲಿ ಕೂರುವಂತೆ ಮಾಡಲಾಯಿತು.

             ಇದೀಗ ಜೆಡಿಎಸ್, ಕಾಂಗ್ರೇಸ್‍ನ ಸಮ್ಮಿಶ್ರ ಸರ್ಕಾರದಲ್ಲೂ ನೆಪ ಮಾತ್ರಕ್ಕ ಡಿಸಿಎಂ ಹುದ್ದೆ ಕೊಟ್ಟು ಇದ್ದಿದ್ದ ಗೃಹ ಖಾತೆ ಕಸಿದುಕೊಳ್ಳಲಾಗಿದೆ ಎಂದು ಅವರು ಆಕ್ರೋಷ ವ್ಯಕ್ತಪಡಿಸಿದರು.ಎಂ.ಸಿ. ಮಾಯಪ್ಪ ಮಾತನಾಡಿ ಕಾಂಗೇಸ್ ಪಕ್ಷ ದಲಿತರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಡಾ.ಜಿ. ಪರಮೇಶ್ವರರು ಈ ರಾಜ್ಯ ಕಂಡ ಅತ್ಯುನ್ನತ ರಾಜಕಾರಣಿ. ಕೈ ಮತ್ತು ಬಾಯಿಯನ್ನು ಶುದ್ಧವಾಗಿಟ್ಟುಕೊಂಡು ರಾಜ್ಯದ ಜನತೆಗಾಗಿ ಕೆಲಸ ಮಾಡುತ್ತಿರುವ ಶ್ರಮ ಜೀವಿ.

             ಹಲವು ವರ್ಷಗಳಿಂದ ಗೃಹ ಖಾತೆಯನ್ನು ನಿರ್ವಹಿಸಿದ ಅನುಭವವಿದೆ. ರಾಜ್ಯದಲ್ಲಿ ಇದುವರೆವಿಗೂ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವಲ್ಲಿ ಪೋಲಿಷ್ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿದೆ ಎಂದರೆ ಅದಕ್ಕೆ ಕಾರಣ ಡಾ.ಜಿ.ಪರಮೇಶ್ವರರ ದಕ್ಷ ಆಡಳಿತ ಎಂದರೆ ತಪ್ಪಾಗಲಾರದು.

             ಹೀಗಿರುವಾಗ ಮತ್ತಯಾರನ್ನೋ ಓಲೈಸುವ ಕಾರಣಕ್ಕಾಗಿ ಡಾ.ಜಿ.ಪರಮೇಶ್ವರರಲ್ಲಿದ್ದ ಗೃಹ ಖಾತೆಯನ್ನು ಕಸಿದುಕೊಂಡಿರುವುದು ಸರಿಯಲ್ಲ. ದಲಿತ ಸಮುದಾಯ ಡಾ.ಜಿ.ಪರಮೇಶ್ವರರ ಹಿಂದೆ ಇದೆ. ಈ ತಕ್ಷಣಕ್ಕೆ ಗೃಹ ಖಾತೆಯನ್ನು ಮರಳಿ ಪುನಃ ಪರಮೇಶ್ವರರಿಗೆ ನೀಡಬೇಕು. ಇಲ್ಲವಾದರೆ ಕಾಂಗ್ರೇಸ್ ಪಕ್ಷದ ವಿರುದ್ಧ ಇಡೀ ದಿತ ಸಮುದಾಯ ನಿಲ್ಲಬೇಕಾಗುತ್ತದೆ ಎಂದು ಹೇಳಿದರು. ಅವರು ಮುಂದುವರೆದು ಚಲವಾದಿ, ಮಾದಿಗ, ಬೋವಿ-ವಡ್ಡರು, ಕೊರಚ-ಕೊರಮ, ಮುಚ್ಚಿಗ-ಮೋಚಿ, ಲಂಬಾಣಿ ಮತ್ತು ನಾಯಕ ಸಮುದಾಯಗಳು ಸೇರಿದಂತೆ ಹಲವು ಸಮುದಾಯಗಳು ಒಂದಾಗಿ ಕಾಂಗ್ರೇಸ್ ಪಕ್ಷದ ವಿರುದ್ಧ ಮುಂದಿನ ದಿನಗಳಲ್ಲಿ ಚಳುವಳಿ ಮಾಡುವ ಮೂಲಕ ಬರುವ ಸಂಸತ್ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಪ್ರತಿಭಟನೆಯಲ್ಲಿ ಕಾಂಗ್ರೇಸ್ ವಿರುದ್ಧ ಗೋಷಣೆ ಕೂಗುವ ಮೂಲಕ ಮಾಯಪ್ಪರು ಆಕ್ರೋಷ ವ್ಯಕ್ತಪಡಿಸಿದರು.

           ಪ್ರತಿಭಟನೆಯಲ್ಲಿ ಬಿ.ನಾಗೇಂದ್ರ, ಎ.ರೇಣುಕಪ್ಪ, ಕೆ.ತಿಮ್ಮಯ್ಯ, ಎಂ.ಗೋಪಾಲ್, ಬಿ.ಚನ್ನಬಸವ, ಟಿ.ವಿರುಪಣ್ಣ, ವಸಂತರಾಜ್, ಎಸ್.ಎರ್ರಿವಾಮಿ, ವಿ.ಕೃಷ್ಣಪ್ಪ, ಗಿರಿರಾಜ, ಟಿ.ನಾಗರಾಜ್, ಕೆ.ಗವಿಸಿದ್ದಪ್ಪ, ಬಾವಿಕಟ್ಟೆ ವೆಂಕಟೇಶ್, ಸಿ.ವೆಂಕಟೇಶ್ ಮತ್ತು ಇನ್ನಿರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link