ಶಿಗ್ಗಾವಿ
ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆ, ತಾಲೂಕ ಸಂಚಾಲಕರಾಗಿ ಕ್ಯಾಲಕೊಂಡ ಗ್ರಾಮದ ಹನುಮಂತಪ್ಪ ಫ ಹರಿಜನ, ಶಹರ ಘಟಕ ಸಂಚಾಲಕ ಸಂತೋಷ ಕಟ್ಟಮನಿ, ತಾಲೂಕಾ ಸಂಘಟನಾ ಸಂಚಾಲಕರಾಗಿ ನೀಲಪ್ಪ ಹಳೆಮನಿ, ಯಲ್ಲಪ್ಪ ಫ ದೊಡ್ಡಮನಿ, ಸಂತೋಷ ದೊಡ್ಡಮನಿ, ಖಜಾಂಚಿ ಬಸವರಾಜ ಬ ಹರಿಜನ ಆಯ್ಕೆಯಾಗಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಯವರ ಆದೇಶದ ಮೇರೆಗೆ ರಾಜ್ಯ ಸಂಘಟನಾ ಸಂಚಾಲಕ ಹೊನ್ನೆಶ್ವರ ಹೆಚ್ ತಗಡಿನಮನಿ ಹಾಗೂ ಹಾವೇರಿ ಜಿಲ್ಲಾ ಸಂಚಾಲಕರಾದ ಹನಮಂತಪ್ಪ ಎಂ ದೊಡ್ಡಮನಿ, ಮಹಿಳಾ ಘಟಕದ ಜಿಲ್ಲಾ ಸಂಚಾಲಕರಾದ ಅಕ್ಷತಾ.ಕೆ.ಸಿ, ಅಲ್ಪಸಂಖ್ಯಾತ ಮಹಿಳಾ ಘಟಕದ ಫರೀಧಾ ನದ್ದಿಮುಲ್ಲಾ ಪದಾಧಿಕಾರಿಗಳ ಆಯ್ಕೆ ಮಾಡಿದರು.
ತಾಲೂಕಿನ ಹಿರಿಯರಾದ ಡಿ.ಎಸ್.ಮಾಳಗಿ, ಕರಿಯಪ್ಪ ಕಟ್ಟಿಮನಿ, ಮಲ್ಲೆಶಪ್ಪ ಹರಿಜನ, ನಿಂಗಪ್ಪ ಹರಿಜನ, ತಾಪಂ ಸದಸ್ಯ ಮಲ್ಲೇಶಪ್ಪ ದೊಡ್ಡಮನಿ, ಎಸ್.ಎಪ್.ಮಣಕಟ್ಟಿ, ಯಲ್ಲಪ್ಪ ಅಂದಲಗಿ, ಬಸವರಾಜ ದೊಡ್ಡಮನಿ, ಆದಿಜಾಂಬವ ಸಮಾಜದ ತಾಲೂಕಾಧ್ಯಕ್ಷ ಹನಮಂತಪ್ಪ ಕ ಮಾದರ, ಡಿ.ಎಸ್.ಎಸ್. ಗೌರವಾಧ್ಯಕ್ಷ ಸಿದ್ದಪ್ಪ ಹರಿಜನ, ಜಿಲ್ಲಾ ಸಂಚಾಲಕ ಭೀಮಣ್ಣ ಹೊಟ್ಟೂರ,