ರಾಣಿಬೆನ್ನೂರ:
ತಾಲೂಕಿನ ಆರೇಮಲ್ಲಾಪೂರದ ಶ್ರೀ ಶರಣ ಬಸವೇಶ್ವರ ಮಠದಲ್ಲಿ ಆ.6ರಂದು101 ಮಹೀಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ನಡೆಯಲಿದೆ, ಅಲ್ಲದೆ ಮಹಿಳೆಯರಿಗೆ ವಸ್ತ್ರದಾನ ಮತ್ತು ಉಡಿ ತುಂಬುವ ಕಾರ್ಯಕ್ರಮ ಜೊತೆಗೆ ರಾಜಭೋಜನ ಮಾಡಿಸಲಾಗುವುದು. ಇದರ ಪ್ರಯುಕ್ತ ಅಂದು ಮುಂಜಾನೆ 5 ಘಂಟೆಗೆ ಮಹಾಧನ್ವಂತರಿ ಹೋಮ ಕೈಗೊಳ್ಳಲಗುವುದು. ಜೊತೆಗೆ ಅಂದೇ ರಕದ ದಾನ ಶಿಬಿರ ಜರುಗಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಬೆಂಗಳೂರಿನ ಶಾಂತವೀರ ಸ್ವಾಮಿಗಳು, ಕೇರಳದ ಅನಂತ ಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕ ಗೋಶಾಲಾ ವಿಷ್ಣುದೇವ ಲಂಭೋದರ, ಡಾ.ಮನೋಜ ಸಾವಕಾರ ಆಗಮಿಸುವರು. ಹೆಚ್ಚಿನ ಮಾಹಿತಿಗಾಗಿ 9731084708, 9535149889ಗೆ ಸಂಪರ್ಕಿಸಬಹುದು ಎಂದು ಶ್ರೀಮಠದ ಪ್ರಣವಾನಂದರಾಮ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.