ನವದೆಹಲಿ:
ಭಾರತ ಮತ್ತು ಆಸಿಸ್ಸ್ ನಡುವೆ ಮಾರ್ಚ್ 1 ರಿಂದ 5ರವರೆಗೆ ನಡೆಯಬೇಕಿರುವ ಮೂರನೇ ಟೆಸ್ಟ್ ಪಂದ್ಯವನ್ನು ಕಳಪೆ ಔಟ್ಫೀಲ್ಡ್ ಪರಿಸ್ಥಿತಿಯ ಕಾರಣ ನೀಡಿ ಧರ್ಮಶಾಲಾದಿಂದ ಇಂದೋರ್ಗೆ ಬಿಸಿಸಿಐ ಸ್ಥಳಾಂತರಿಸಿದೆ.
ಬಿಸಿಸಿಐ ಕ್ಯುರೇಟರ್ ತಪೋಶ್ ಚಟರ್ಜಿ ಅವರು ನೀಡಿದ ವರದಿಯಲ್ಲಿ, ಕ್ರೀಡಾಂಗಣದ ರಿಲೇಯ್ಡ್ ಔಟ್ಫೀಲ್ಡ್ ಅನ್ನು ಅಂತರರಾಷ್ಟ್ರೀಯ ಪಂದ್ಯಕ್ಕೆ ಅನರ್ಹವೆಂದು ಪರಿಗಣಿಸಿದ ನಂತರ ಪಂದ್ಯವನ್ನು ಸ್ಥಳಾಂತರಿಸಲಾಗುವುದು ಎಂದು ಭಾನುವಾರವೇ ದೃಢಪಡಿಸಲಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಪ್ರವಾಸಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೂರನೇ ಟೆಸ್ಟ್ ಪಂದ್ಯವನ್ನು ಮಾರ್ಚ್ 1 ರಿಂದ 5 ರವರೆಗೆ ನಡೆಸಲು ಧರ್ಮಶಾಲಾದ ಎಚ್ಪಿಸಿಎ ಕ್ರೀಡಾಂಗಣವನ್ನು ಆಯ್ಕೆ ಮಾಡಲಾಗಿತ್ತು. ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಮೈದಾನವು ಇನ್ನೂ ಯೋಗ್ಯವಾಗಿಲ್ಲದ ಕಾರಣ ಇದೀಗ ಇಂದೋರ್ನ ಹೋಲ್ಕರ್ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/02/Untitled-5-16.jpg)