ತುಮಕೂರು:
ದೇಶದಲ್ಲಿ ಮಾಹಿತಿತಂತ್ರಜ್ಞಾನದ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಪ್ರತಿಯೊಂದುಕ್ಷೇತ್ರದಲ್ಲೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಹಲವಾರು ದೈನಂದಿನ ಪ್ರಕ್ರಿಯೆಗಳನ್ನು ಸರಳೀಕರಿಸಬಹುದು, ಮುಖ್ಯವಾಗಿ ಕಾಲೇಜುಗಳು ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಹಲವಾರುಸೌಲತ್ತುಗಳನ್ನು ನೀಡಬಹುದು.
ವಿದ್ಯಾರ್ಥಿಗಳ ಅಲೆದಾಟವನ್ನು ಕಡಿಮೆ ಮಾಡಬಹುದು, ಈ ನಿಟ್ಟಿನಲ್ಲಿ ಕಾಲೇಜುಗಳು ಮುಖ್ಯವಾಗಿ ಭೋಧಕ ವರ್ಗ ಲಬ್ಯವಿರುವ ತಂತ್ರಜ್ಞಾನವನ್ನು ವಿದ್ಯಾರ್ಥಿ ಸ್ನೇಹಿಯಾಗಿ ಬಹಳಸಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕುಎಂದುತುಮಕೂರು ವಿ.ವಿ ಕುಲಪತಿ ವೈ.ಎಸ್ ಸಿದ್ದೇಗೌಡ ಸಲಹೆ ನೀಡಿದರು,
ಶ್ರೀಯುತರು ದಿನಾಂಕ 23.07.2019 ರಂದು ವಿ.ವಿಯಲ್ಲಿರಾಷ್ಟ್ರೀಯ ಮಾಹಿತಿ ಕೇಂದ್ರದ ವತಿಯಿಂದ ಅಳವಡಿಸಲಾಗಿರುವ ತಂತ್ರಜ್ಞಾನದ ಬಗ್ಗೆ ಕಾಲೇಜುಗಳ ಪ್ರಾಂಶುಪಾಲರುಗಳು ಸಿಬ್ಭಂಧಿ ವರ್ಗಕ್ಕೆಆಯೋಜಿಸಿದ್ದ ತರಭೇತಿಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ರಾಷ್ಟ್ರೀಯ ಮಾಹಿತಿಕೇಂದ್ರದ ಹಿರಿಯ ಅಧಿಕಾರಿಗಳಾದ ಶ್ರೀ.ತಂಗವೇಲು.ಎಲ್, ಹಾಗೂ ಶ್ರೀ.ಷಣ್ಮುಗಂ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾಲೇಜುಗಳು ಯಾವರೀತಿಯಲ್ಲಿತನ್ನ ಪ್ರವೇಶ, ಪರೀಕ್ಷಾ ವ್ಯವಸ್ಥೆಯಲ್ಲಿ ವಿ.ವಿಯಲ್ಲಿ ಈಗಾಗಲೆ ಅಳವಡಿಸಲಾಗಿರುವ ತಂತ್ರಜ್ಞಾನವನ್ನುಉಪಯೋಗಿಸಬಹುದೆಂದು ಮಾಹಿತಿ ನೀಡಿದರು.ಪರೀಕ್ಷಾಂಗ ಕುಲಸಚಿವ ಪ್ರೋ.ಕೆ.ಜೆ ಸುರೇಶ್ ಉಪಕುಲಸಚಿವ .ಡಾ.ರಮೇಶ್ ಸಾಲಿಯಾನ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
