ನಗರಕ್ಕೆ ಹೇಮಾವತಿ-ಎತ್ತಿನಹೊಳೆಯಿಂದ 2 ಟಿ.ಎಂ.ಸಿ. ನೀರಿಗೆ ಕೋರಿಕೆ..!

ತುಮಕೂರು
     ತುಮಕೂರು ನಗರಕ್ಕೆ ಹೇಮಾವತಿ ನಾಲೆಯಿಂದ ಮತ್ತು ಎತ್ತಿನಹೊಳೆ ಯೋಜನೆಯಿಂದ ಒಟ್ಟು 2 ಟಿ.ಎಂ.ಸಿ. ನೀರನ್ನು ನಿಗದಿಪಡಿಸಲು ರಾಜ್ಯ ಸರ್ಕಾರವನ್ನು ಕೋರಿ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸಲು ತುಮಕೂರು ಮಹಾನಗರ ಪಾಲಿಕೆಯು ಮಹತ್ವದ ತೀರ್ಮಾನ ಕೈಗೊಂಡಿದೆ.
     ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ನೀಡಿದ್ದ ಸೂಚನೆ ಮೇರೆಗೆ ಪಾಲಿಕೆಯ ಆಡಳಿತವು ಈ ಬಗ್ಗೆ ಟಿಪ್ಪಣಿಯೊಂದನ್ನು ಸಿದ್ಧಪಡಿಸಿ ಅದನ್ನು ಮೇಯರ್ ಲಲಿತಾ ರವೀಶ್ (ಜೆಡಿಎಸ್) ಅವರ ಅಧ್ಯಕ್ಷತೆಯಲ್ಲಿ ಏರ್ಪಟ್ಟಿದ್ದ ಮಹಾನಗರ ಪಾಲಿಕೆಯ ಇತ್ತೀಚಿನ ಸಾಮಾನ್ಯ ಸಭೆಯಲ್ಲಿ ಮಂಡಿಸಿದ್ದ  ಹಿನ್ನೆಲೆಯಲ್ಲಿ ಸಭೆಯು ಚರ್ಚಿಸಿ ಅದಕ್ಕೆ ಸಹಮತ ಸೂಚಿಸಿದೆ. 
ಈ ಸಭೆಯಲ್ಲಿ ಮಂಡಿಸಲಾದ ಟಿಪ್ಪಣಿಯಲ್ಲಿನ ಮುಖ್ಯಾಂಶಗಳು ಈ ಕೆಳಗಿನಂತಿವೆ:- 
    `ತುಮಕೂರು ನಗರದ ಜನಸಂಖ್ಯೆ ಸ್ಥಳೀಯರಷ್ಟೆ  ಅಲ್ಲದೆ ಇಲ್ಲಿಗೆ ಬಂದು ಹೋಗುವವರನ್ನೂ ಒಳಗೊಂಡು ಸುಮಾರು 4 ಲಕ್ಷ ದಾಟಿದೆ. ಇದಕ್ಕೆ ಅನುಗುಣವಾಗಿ ದಿನವೂ 62 ಎಂ.ಎಲ್.ಡಿ. ಯಷ್ಟು  ನೀರಿನ ಅಗತ್ಯತೆ ಇರುತ್ತದೆ. ಹೇಮಾವತಿ ಯೋಜನೆಯಲ್ಲಿ 1986 ರ ಸರ್ಕಾರಿ ಆದೇಶದ ಪ್ರಕಾರ ತುಮಕೂರು ನಗರಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಎಂದು ವµÀðಕ್ಕೆ 1.135 ಟಿ.ಎಂ.ಸಿ.ಯಷ್ಟೆ ನೀರನ್ನು ನಿಗದಿಪಡಿಸಲಾಗಿದೆ.’  
     `ಬುಗುಡನಹಳ್ಳಿ ಜಲಸಂಗ್ರಹಾಗಾರದ ಮಣ್ಣಿನ ಕಣ ರಚನೆಯ ತಾಂತ್ರಿಕ ಅಂಶಗಳ ಆಧಾರದಲ್ಲಿ ನೀರಿನ ಧಷ್ಪೀಕರಣ  ಮತ್ತು ಇಂಗುವಿಕೆ ಯು ಒಟ್ಟು ನೀರಿನ ಪ್ರಮಾಣದಲ್ಲಿ ಶೇ. 30 ರಷ್ಟು  ಇರುತ್ತದೆ. ಈ ನಷ್ಟವು ತಪ್ಪಿಸಲಾಗದ ಸ್ವರೂಪದ್ದಾಗಿದೆ.’
     `ಕೈಗಾರಿಕೀಕರಣದಿಂದ ತುಮಕೂರು ನಗರವು ಬೆಳೆಯುತ್ತಿದೆ. ಸ್ಮಾರ್ಟ್ಸಿಟಿ ಯೋಜನೆ ಹಾಗೂ ಎಕ್ಸ್ಪ್ರೆಸ್ ಹೈವೆ ಕಾರಿಡಾರ್ ಯೋಜನೆಯಿಂದ ನಗರ ಬೆಳವಣಿಗೆ ಹೊಂದುತ್ತಿದ್ದು, ಜನಸಂಖ್ಯೆಯೂ ಏರುತ್ತಿದೆ. ಅದಕ್ಕೆ ತಕ್ಕಂತೆ ಕುಡಿಯುವ ನೀರನ್ನು ಕನಿಷ್ಟ  ಪ್ರಮಾಣದಲ್ಲೂ ಒದಗಿಸುವುದು ಕಷ್ಟವಾಗುತ್ತಿದೆ.’
    `ಪ್ರಸ್ತುತ ತುಮಕೂರು ನಗರದ ಜನಸಂಖ್ಯಾ ಬೆಳವಣಿಗೆಯ ದರವು ಶೇ. 21 ರಿಂದ 23 ರಷ್ಟಿದೆ. ನಗರೀಕರಣ ಪ್ರಕ್ರಿಯೆ, ಉದ್ಯೋಗ ಅರಸಿ ಬರುವವರು, ಬೆಂಗಳೂರು ನಗರದ ಒತ್ತಡ ತಾಳಲಾರದೆ ತುಮಕೂರಿನಲ್ಲಿ ನೆಲೆಸಿ ತುಮಕೂರಿನಿಂದ ದಿನವೂ ಬೆಂಗಳೂರಿಗೆ ಸಂಚರಿಸುವವರು -ಹೀಗೆ ನಗರದ ಜನಸಂಖ್ಯೆ ಏರುತ್ತಿದೆ. ಈಗಿನ ಜನಸಂಖ್ಯೆಗೆ ಹಾಗೂ ಮುಂದಿನ 10 ವರ್ಷಗಳಲ್ಲಿ ಆಗುವ ಜನಸಂಖ್ಯೆಯನ್ನು ಗುರಿಯಲ್ಲಿಟ್ಟುಕೊಂಡು ತುಮಕೂರು ನಗರಕ್ಕೆ ನಿಗದಿಪಡಿಸಿರುವ ನೀರಿನ ಪ್ರಮಾಣವನ್ನು 2 ಟಿ.ಎಂ.ಸಿ.ಗೆ ಏರಿಸಬೇಕಾದ ಅಗತ್ಯವಿದೆ.’
    `ಇವೆಲ್ಲ ಕಾರಣಗಳಿಂದ ಹೇಮಾವತಿ ನಾಲೆಯಿಂದ ಈಗ ನಿಗದಿಯಾಗಿರುವ 1.135 ಟಿ.ಎಂ.ಸಿ. ಪ್ರಮಾಣವನ್ನು ಪರಿµÀ್ಕರಿಸಬೇಕು. ಹೇಮಾವತಿಯಿಂದ  1.5 ಟಿ.ಎಂ.ಸಿ. ಹಾಗೂ ಎತ್ತಿನಹೊಳೆ ಯೋಜನೆಯಿಂದ ಹೆಚ್ಚುವರಿಯಾಗಿ 0.5 ಟಿ.ಎಂ.ಸಿ. ನೀರನ್ನು ನಿಗದಿಗೊಳಿಸಬೇಕು’ ಎಂದು ಸಭೆಗೆ ಮಾಹಿತಿ ನೀಡಲಾಗಿತ್ತು.
    ಈ ವಿಷಯವಾಗಿ ಸಭೆಯು ವಿಸ್ತೃತವಾಗಿ ಚರ್ಚಿಸಿ, ಪ್ರಸ್ತುತ ಮೀಸಲಿಟ್ಟಿರುವ 1.135 ಟಿ.ಎಂ.ಸಿ. ಪ್ರಮಾಣವನ್ನು ಪರಿಷ್ಕರಿಸಿ, ಹೇಮಾವತಿ ನಾಲೆಯಿಂದ ಮತ್ತು ಎತ್ತಿನ ಹೊಳೆ ಯೋಜನೆಯೊಂದ ಒಟ್ಟು 2 ಟಿ.ಎಂ.ಸಿ. ನೀರನ್ನು ನಿಗದಿಪಡಿಸಲು ಸರ್ಕಾರವನ್ನು ಕೋರಲು ಸಭೆಯು ತೀರ್ಮಾನಿಸಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link