ತುಮಕೂರು

ಹೋರಾಟದ ಹಿನ್ನೆಲೆಯಿಂದ ಬಂದ ಯಡಿಯೂರಪ್ಪ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಆಶ್ವಾಸನಗಳನ್ನು ಈಡೇರಿಸುವಲ್ಲಿ ಕಣ್ಣಿದ್ದು ಕುರುಡರು ಕಿವಿ ಇದ್ದು ಕಿವುಡರು ಆಗಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸಿಎಂ ವಿರುದ್ಧ ವಾಗ್ಧಾಳಿ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಆತ್ಮವಂಚನೆ ಮಾಡಿಕೊಳ್ಳು ತ್ತಿದ್ದಾರೆ . ಈ ಹಿಂದೆ ನಾನು ವಿಪಕ್ಷ ನಾಯಕ ಸ್ಥಾನದಲ್ಲಿದ್ದಾಗ ಮುಖ್ಯಮಂತ್ರಿಗೆ ರೈತರು ಸಂಕಷ್ಟದಲ್ಲಿದ್ದಾರೆ. ನೀವು ರೈತರ ಪರ ನಾಯಕರು ಎಂದು ಹೇಳುತ್ತೀರಿ ಅಲ್ವಾ, ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದಾಗ ನಮ್ಮ ಬಳಿ ಹಣ ಪ್ರಿಂಟ್ ಮಾಡುವ ಮಷಿನ್ ಇಲ್ಲ. ಕೇಂದ್ರ ಸರ್ಕಾರವೇ ಸಾಲ ಮನ್ನಾ ಮಾಡಬೇಕು ಎಂದ್ದಿದ್ದರು. ಅಧಿಕಾರಕ್ಕೆ ಬರಲು ಏನೆಲ್ಲಾ ಹೇಳಿರುತ್ತೇವೆ ಅದನ್ನೆಲ್ಲ ಮಾಡೋಕೆ ಆಗುತ್ತಾ ಎಂದಿದ್ದರು ಎಂದು ಉಗ್ರಪ್ಪ ತಿಳಿಸಿದರು.
ಸಿಎಂ ಯಡಿಯೂರಪ್ಪ ರಾಜಾಹುಲಿ ಅಲ್ಲ. ರಾಜಾಇಲಿ. ಕೇವಲ ರಾಜ್ಯದಲ್ಲಿ ಅವರ ಬಗ್ಗೆ ಡಂಗುರು ಸಾರುತ್ತಾರೆ ಹೊರತು ಹೈಕಮಾಂಡ್ ಮುಂದೆ ಮಾತನಾಡಲು ಆಗುವುದಿಲ್ಲ. ನೆರೆ ಸಂತ್ರಸ್ಥರಿಗೆ ಎಸ್ಡಿಆರ್ ಎಫ್ ಮತ್ತು ಎನ್ಡಿಆರ್ಎಫ್ನಿಂದ ಹಣ ನೀಡಿಲ್ಲ. ಇನ್ನೂ ಆರು ತಿಂಗಳು ಬೇಕು ಎನ್ನುತ್ತಾರೆ.
ನೆರೆಯಿಂದ 1 ಲಕ್ಷ ಕೋಟಿಯಷ್ಟು ನಷ್ಟ ಉಂಟಾದರೆ ಬಿಎಸ್ವೈ ಅವರು 50 ಸಾವಿರ ಕೋಟಿ ಎಂದು ಹೇಳುತ್ತಾರೆ. ವರದಿ ತಯಾರಿಸುವಾಗ 38 ಸಾವಿರ ಕೋಟಿ ಎನ್ನುತ್ತಾರೆ. ಈಗ ಕೊನೆಯದಾಗಿ 35,200 ಕೋಟಿ ರೂಗಳು ನಷ್ಟ ಸಂಭವಿಸಿದೆ ಎಂದು ಹೇಳಿ, ಕೇವಲ 1869 ಕೋಟಿ ಮಾತ್ರ ಹಣ ತಂದು ನೀಡಿದ್ದಾರೆ. ಅವರಿಗೆ ನಾಚಿಕೆಯಾಗುತ್ತಿಲ್ಲವೇ..? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಟ್ರಾಕ್ಟ್ ಬೇಸ್ಡ್ ಕೆಲಸ ಮಾಡುವ ಶಿಕ್ಷಕರಿಗೆ ವೇತನ ನೀಡಲು ಸಾಧ್ಯವಾಗಿಲ್ಲ. ವಿಧವಾ ವೇತನ ನೀಡಲು ಸಾಧ್ಯವಾಗಿಲ್ಲ. ನರೇಗಾ ಯೋಜನೆಗೆ ಹಣ ತರಲು ಆಗಿಲ್ಲ. ನಮ್ಮ ರಾಜ್ಯದ ಜಿಎಸ್ಟಿ ಹಣ ತರಲು ಆಗುತ್ತಿಲ್ಲ. ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಇಳಿದಿದೆ. ಇದನ್ನು ಮರೆ ಮಾಚಲು ಭಾವನಾತ್ಮಕ ವಿಷಯಗಳನ್ನು ಹೇಳುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ . ದೇಶದ ಜಿಡಿಪಿ 3. ದೇಶದಲ್ಲಿ, ರಾಜ್ಯದಲ್ಲಿ ಆರ್ಥಿಕತೆ ದಾರಿ ತಪ್ಪಿದೆ. ಇದಕ್ಕೆ ನೇರ ಕಾರಣ ಮೋದಿ ಅವರ ತಪ್ಪು ಆರ್ಥಿಕ ನಿರ್ಧಾರ.
ಮೋದಿ ನಿನಗೆ ತಾಕತ್ತಿದ್ದರೆ ಪಾಕಿಸ್ತಾನ ಮುಗಿಸಿ. ಹೇಗೆ ಇಂದಿರಾಗಾಂಧಿ ಅವರು ಪಾಕಿಸ್ತಾನವನ್ನು ಸೆದೆ ಬಡಿದರೋ ಆ ರೀತಿ ನಿರ್ಧಾರ ತೆಗೆದುಕೊಳ್ಳಿ. ನಿಮಗೆ ನಮ್ಮ ಬೆಂಬಲವಿದೆ ಎಂದರು. ಸಿ.ಟಿ.ರವಿ ಶ್ರೀಲಂಕಾದಲ್ಲಿರುವ, ಗೋವಾದಲ್ಲಿರುವ ಕ್ಯಾಸಿನೊ ತರ ರಾಜ್ಯದಲ್ಲಿದ್ದಾರೆ. ಇದು ಬಿಜೆಪಿಯವರ ಆಡಳಿತ ತೋರಿಸುತ್ತದೆ.
ಕುಡಿಯುವ ನೀರು, ಶಾಲಾ ಕಾಲೇಜುಗಳ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ನಿಮಗೆ ನಾಚಿಕೆಯಗಲ್ಲವೇ ಎಂದು ಪ್ರಶ್ನಿಸಿದರು .ವಿದೇಶಿಯವರನ್ನು ಆಕರ್ಷಣೆಗೆ ಕ್ಯಾಸಿನೊ ಕಟ್ಟಲು ಹೊರಟಿದ್ದಾರೆ. ಬಳ್ಳಾರಿ ನನ್ನ ಕರ್ಮ ಭೂಮಿ. ಜನ್ಮ ಭೂಮಿ. ನಿತ್ಯ ಸಾವಿರಾರು ಜನ ವಿದೇಶಿಯರು ಬರುತ್ತಾರೆ. ವಿಶ್ವದ ಮೂಲೆ ಮೂಲೆಯಿಂದ ಹಂಪಿ ನೋಡಲು ಬರುತ್ತಾರೆ. ಅದನ್ನು ಏಕೆ ಅಭಿವೃದ್ಧಿ ಮಾಡುತ್ತಿಲ್ಲ. ಇರುವ ಅನುದಾನ ಏಕೆ ಬಳಸುತ್ತಿಲ್ಲ ಎಂದರು.
ಮೋಜು ಮಸ್ತಿ ಮಾಡಲು ವಿದೇಶಿಯರಿಗೆ ಕ್ಯಾಸಿನೊ ಪ್ರಾರಂಭಿಸುತ್ತಿದ್ದಾರೆ.ಯಡಿಯೂರಪ್ಪ ಅಂಟ್ ಕಂಪನಿಯನ್ನು ಧರ್ಮರಾಯ ಎಂದು ಕರೆಯಲ್ಲ. ರಾಜ್ಯದಲ್ಲಿ ನಡೆಯುವ ಮಟ್ಕಾ ನಿಲ್ಲಿಸಲು ಸಾಧ್ಯವಾಗಿಲ್ಲ. ಕೋಳಿ ಪಂದ್ಯ ನಿಲ್ಲಿಸಿಲ್ಲ ಎಂದರು.ಗುಂಪುಗಾರಿಕೆ ಶುರುವಾಗಿದೆ. ಶೆಟ್ಟರ್, ಪ್ರಹ್ಲಾದ ಜೋಶಿ, ಅಶೋಕ್ ಗುಂಪು. ಸಂತೋಷ್ ಅಲ್ಲ. ಅಸಂತೋಷ. ಅವರಿಗೆ ಭಾರತದ ಸಂಸ್ಕೃತಿಯೇ ಗೊತ್ತಿಲ್ಲ. ದೇಶದ ಪರಂಪರೆ, ಸಂಸ್ಕೃತಿ ಬಿಜೆಪಿಯವರಿಗೆ ಗೊತ್ತಿಲ್ಲ. ಅಧಿಕಾರ ಶಾಶ್ವತವಲ್ಲ. ಮನುಷ್ಯನಿಗೆ ಬದ್ಧತೆ ಮುಖ್ಯ.ಜನರ ಧ್ವನಿಯಾಗಿ ಕಾಂಗ್ರೆಸ್ ಕೆಲಸ ಮಾಡುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
