ಬಡ್ಡಿ ಮನ್ನಾಗೆ ಕೆಪಿಸಿಸಿ ಅಧ್ಯಕ್ಷ ಡಿಕೆಸಿ ಆಗ್ರಹ

ತುಮಕೂರು:

    ಹೈಕಮಾಂಡ್ ನನ್ನ ಮೇಲೆ ನಂಬಿಕೆ ಇಟ್ಟು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಿದೆ. ಆದ್ದರಿಂದ ಅವರ ನಂಬಿಕೆಗೆ ಪಾತ್ರನಾಗಿ, ಜನರ ಧ್ವನಿಯಾಗಿ ಕೆಲಸ ಮಾಡುವುದೇ ನನ್ನ ಆಸೆ. ಹೊಸದಾಗಿ ಸಿಕ್ಕಿರುವ ಒಂದು ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.

     ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ ಪಡೆದು ಬಳಿಕ ಮಾತನಾಡಿದ ಅವರು, ಸುಮಾರು 97 ,98 ವರ್ಷವಾದರೂ ನಿಂತುಕೊಂಡೇ ಮಾತನಾಡುವ ವ್ಯಕ್ತಿಯನ್ನು ನನ್ನ ರಾಜಕಾರಣ ಯುಗದಲ್ಲಿ ನೋಡಿದ್ದರೆ ಅದು ಸಿದ್ದಗಂಗೆಯ ಶಿವಕುಮಾರ ಶ್ರೀಗಳು ಮಾತ್ರ. ಅವರು ಸಮಾಜಕ್ಕೆ ಮಾರ್ಗದರ್ಶಕರಾಗಿ ನೀಡುತ್ತಿದ ಸಲಹೆಗಳು ಅವಿಸ್ಮರಣೀಯ ಎಂದರು.

  ಕಳೆದ ಬಜೆಟ್‌ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ಶ್ರೀಗಳ ಹುಟ್ಟೂರು ವೀರಾಪುರವನ್ನು ಮಾದರಿ ಗ್ರಾಮ ಮಾಡಲು ನಿರ್ಧರಿಸಲಾಗಿದ್ದು, ಈಗಿರುವ ಬಿಜೆಪಿ ಸರ್ಕಾರವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅನ್ನ ದಾಸೋಹ ವಿದ್ಯಾ ದಾಸೋಹ ಮತ್ತು ಧರ್ಮವನ್ನು ಉಳಿಸುವುದರ ಜೊತೆಗೆ ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ಶ್ರೀಮಠ ಹಿಂದಿನಿದಲೂ ಮಾಡಿಕೊಂಡು ಬರುತ್ತಿದೆ. ಪ್ರತಿ ವರ್ಷ ಸುಮಾರು ೧೦ ಸಾವಿರ ಮಕ್ಕಳಿಗೆ ವಿದ್ಯೆ ಮತ್ತು ಅನ್ನ ದಾಸೋಹವನ್ನು ನೀಡುವ ಶ್ರೀಮಠವು ಯಾವ ಸರ್ಕಾರಗಳು ಮಾಡದಂತಹ ಕೆಲಸವನ್ನು ಮಾಡುತ್ತಿದೆ ಎಂದರು.

   ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಬಂದು ದಿವ್ಯ ಚೇತನವುಳ್ಳು ಶ್ರೀಮಠದಲ್ಲಿ ಶ್ರೀಗಳ ಆಶೀರ್ವಾದ, ಅವರ ಶಕ್ತಿಯನ್ನು ಪಡೆದು ಕಾರ್ಯನಿಮಿತ್ತನಾಗಬೇಕೆಂಬ ಆಸೆಯಿಂದ ಬಂದಿದ್ದೇನೆ. ವಿದ್ಯೆ, ದಾನ, ಧರ್ಮ, ಸಂಸ್ಕೃತಿ, ಭಾಷೆ ಇವೆಲ್ಲ ದೇಶದ ಬಹು ದೊಡ್ಡ ಶಕ್ತಿ. ಅವುಗಳನ್ನು ಉಳಿಸುವ ಕಾರ್ಯದಲ್ಲಿ ಶ್ರೀಮಠ ನಿರತವಾಗಿದೆ ಎಂದರು.

     ಕೊರೊನಾ ವೈರಸ್‌ನಿಂದ ಇಡೀ ದೇಶ ನಿಬ್ಬೆರಗಾಗಿದೆ. ರಾಜ್ಯದಲ್ಲಿ ನೀಡಿರುವ ಒಂದು ತಿಂಗಳ ರಜೆಯಲ್ಲಿ ಜನರ ಬದುಕು ಅವ್ಯವಸ್ಥೆಯಾಗುತ್ತಿದೆ. ಬ್ಯಾಂಕುಗಳಲ್ಲಿ, ಸೊಸೈಟಿಗಳಲ್ಲಿ ಜನರು ಸಾಲ ತೀರಿಸಲು ಆಗದೆ ಬಳಲುವಂತಾಗುತ್ತಿದೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ತಿಂಗಳ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಬೇಕು ಜೊತೆಗೆ ಅದರ ಇಎಂಐ ಅನ್ನೂ ಮುಂದೂಡಬೇಕು. ವೈರಸ್ ಸಂಬಂಧಿಸಿದಂತೆ ಸರ್ಕಾರ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಎಲ್ಲಾ ಮೆಡಿಕಲ್‌ಗಳು ಮತ್ತು ಆಸ್ಪತ್ರೆಗಳ ಸಭೆ ಕರೆದು ಅವರವರಿಗೆ ಸರ್ವೀಸ್ ಓರಿಯಂಟೆಡ್ ಆಗಿ ಸರ್ಕಾರ ಮಾರ್ಗದರ್ಶಿನ ನೀಡಬೇಕು ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

  

Recent Articles

spot_img

Related Stories

Share via
Copy link