ಬೆಂಗಳೂರು
ಇಂದಿನಿಂದ ಕೊರೋನಾ ಎಫೆಕ್ಟ್ ನ ಪಡಿತರ ವಿತರಣೆಯನ್ನು ಕರ್ನಾಟಕ ಸರ್ಕಾರ ಆರಂಭಿಸಲಿದೆ.ಏಪ್ರಿಲ್ ಮತ್ತು ಮೇ ಎರಡೂ ತಿಂಗಳ ಪಡಿತರವನ್ನು ಇಂದಿನಿಂದಲೇ ವಿತರಣೆಯಾಗಲಿದೆ.ಕಡುಬಡವರ ಅಂತ್ಯೋದಯ ಕಾರ್ಡು ದಾರರಿಗೆ ಎರಡು ತಿಂಗಳ 70 ಕೆಜಿ ಅಕ್ಕಿ ದೊರೆಯಲಿದೆ.
ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ಯೂನಿಟ್ ಗೆ 5 ಕೆಜಿ ಅಕ್ಕಿ, ಪ್ರತಿ ಕಾರ್ಡಿಗೆ 2ಕೆಜಿ ಗೋಧಿ ವಿತರಣೆಯಾಗಲಿದೆ.ಏಪ್ರಿಲ್ 10ರ ಒಳಗೆ ರಾಜ್ಯದ ಪಡಿತರ ವಿತರಣೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು,ಏಪ್ರಿಲ್ 10ರ ನಂತರ ಕೇಂದ್ರ ಸರ್ಕಾರದ ಪಡಿತರ ಪ್ಯಾಕೇಜ್ ವಿತರಿಸಲಾಗುವುದು.
ಈಗಾಗಲೇ ಬೆರಳಚ್ಚು ವಿಧಾನ ರದ್ದು ಮಾಡಲಾಗಿದೆ, ಓಟಿಪಿ ಆಧಾರದ ಹಂಚಿಕೆಯೂ ರದ್ದಾಗಬೇಕಿದೆ.ಸಾಮಾಜಿಕ ಅಂತರ ಕಾಯಲು ಓಟಿಪಿ ರದ್ದಾಗಬೇಕು ಎಂಬುದು ಪಡಿತರ ವಿತರಕರ ಆಗ್ರಹವಿದೆ.ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಂದೇ ಪಡಿತರ ವಿತರಣೆ ಶುರುವಾಗಲಿದೆ, ಹಳ್ಳಿಗಳಲ್ಲಿ ವಿತರಣೆಗೆ ಎರಡು ದಿನ ಸಮಯ ಬೇಕಾಗಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
