ಬೆಂಗಳೂರು:
ರಾಜ್ಯದ ಜನರಿಗೆ ಹಾಗು ಮಾಧ್ಯಮಗಳಿಗೆ ರಾಜ್ಯ ಸರ್ಕಾರ ಕೊರೋನಾ ಬಗ್ಗೆ ಸುಸ್ಪಷ್ಟ ಮಾಹಿತಿ ನೀಡುತ್ತೇವೆ ಎಂದು ಹೇಳುವ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರು ಮಧ್ಯಾಹ್ನದ ವರದಿ ಗಮನಿಸಿದರೆ ಅದರಲ್ಲಿ ಮೊದಲು ಅಂದರೆ ನಿನ್ನೆ ಬಿಡುಗಡೆ ಮಾಡಿರುವ ವರದಿಗೂ ಇಂದು ಬಂದಿರುವ ವರದಿಯಲ್ಲಿನ ಮಾಹಿತಿಗೂ ಅಜಗಜಾಂತರ ವ್ಯತ್ಯಾಸವಿದೆ ಎನ್ನಲಾಗಿದೆ
ಇಂದು ಮದ್ಯಾಹ್ನದ ವೇಳಗೆ ರಾಜ್ಯದಲ್ಲಿ 63 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1458ಕ್ಕೆ ಏರಿಕೆಯಾಗಿದೆ.ಆದರೆ, ಆರೋಗ್ಯ ಇಲಾಖೆ ಬುಧವಾರ ತನ್ನ ಹೆಲ್ತ್ ಬುಲೆಟಿನ್ ನಮೂನೆಯನ್ನು ಬದಲಿಸಿದೆ. ಈ ಬುಲೆಟಿನ್ನಲ್ಲಿ ಸೋಂಕಿತರ ಕುರಿತು ಯಾವುದೇ ಮಾಹಿತಿಯನ್ನು ಆರೋಗ್ಯ ಇಲಾಖೆ ಬಹಿರಂಗ ಪಡಿಸಿಲ್ಲ. ಪ್ರತಿದಿನ ಬಿಡುಗಡೆಯಾಗುತ್ತಿದ್ದ ವರದಿಯಲ್ಲಿ ರೋಗಿಯ ನಂಬರ್ (P-XX), ಸೋಂಕಿತರ ಮೂಲದ(ತವರು ಜಿಲ್ಲೆ ಅಥವಾ ಊರು) ಕುರಿತು ಎಲ್ಲ ಮಾಹಿತಿಯೂ ಇರುತ್ತಿತ್ತು. ಆದರೆ, ಬುಧವಾರದ ಹೆಲ್ತ್ ಬುಲೆಟಿನ್ನಲ್ಲಿ ಕೇವಲ ಸೋಂಕಿತರ ಸಂಖ್ಯೆಯನ್ನಷ್ಟೇ ನೀಡಲಾಗಿದೆ.
ಇನ್ನು ಬುಲೆಟಿನ್ನಲ್ಲಿ ಸೋಂಕಿತರ ಲಿಂಗ, ವಯಸ್ಸು, ಟ್ರಾವೆಲ್ ಹಿಸ್ಟರಿ, ಸೋಂಕಿನ ಮೂಲ ಸೇರಿದಂತೆ ರಾಜ್ಯವಾರು ಹಾಗೂ ನಗರವಾರು ಮಾಹಿತಿ ಇರುತ್ತಿತ್ತು. ಈಗ ಕೇವಲ ಜಿಲ್ಲಾವಾರು ಸಂಖ್ಯೆಗಳನ್ನಷ್ಟೇ ನೀಡಲಾಗಿದೆ.
ಸೋಂಕನ್ನು ನಿಯಂತ್ರಣದಲ್ಲಿಡಲು ಸೋಕಿತರ ಮೂಲ ಯಾವುದು ಎಂದು ತಿಳಿಯುವುದು ಪ್ರಮುಖವಾಗುತ್ತದೆ. ಆದರೆ, ಹೆಲ್ತ್ ಬುಲೆಟಿನ್ನಲ್ಲಿ ಈ ಮುಖ್ಯ ಮಾಹಿತಿಯೇ ಇಲ್ಲದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಸೋಂಕಿತರ ಮಾಹಿತಿಯನ್ನು ರಾಜ್ಯ ಸರಕಾರವೇ ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದೆಯೇ ಎಂಬ ಚರ್ಚೆಗಳೂ ಆರಂಭವಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/05/Untitled-2-7.gif)