ಶಿವಮೊಗ್ಗ :
ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಾ ನದಿ ತುಂಬಿ ಹರಿಯುತ್ತಿದೆ. ಪ್ರವಾಹಕ್ಕೆ ಸಿಲುಕಿದ ಹಾವುಗಳು ಪ್ರಾಣಭೀತಿಯಲ್ಲಿ ತುಂಗಾ ಸೇತುವೆ ಬಳಿಯ ಮರಗಳನ್ನೇರಿ ನಲುಗುತ್ತಿವೆ.
ಅತಿಯಾದ ಮಳೆಯ ಕಾರಣ ಜಲಚರಗಳು, ಸರೀಸೃಪಗಳು ಸಂಕಷ್ಟಕ್ಕೆ ಸಿಲುಕಿವೆ. ಹಾವುಗಳು ಪ್ರವಾಹದ ರಭಸಕ್ಕೆ ಕೊಚ್ಚಿಹೋಗುತ್ತಿವೆ. ಪ್ರವಾಹಕ್ಕೆ ಸಿಲುಕಿರುವ ಹತ್ತಾರು ಹಾವುಗಳು ನೀರಿನಿಂದ ರಕ್ಷಣೆ ಪಡೆಯಲು ನದಿಯಂಚಿನ ಮರಗಳನ್ನು ಏರಿ ಕುಳಿತಿದ್ದು ಪ್ರವಾಹದಿಂದ ರಕ್ಷಣೆ ಪಡೆದಿವೆ.
ಈಗಾಗಲೇ ನದಿ ಪಾತ್ರದ ಜನತೆಗೆ ಆತಂಕ ಹೆಚ್ಚಾಗಿದ್ದು, ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಜನ ಜೀವನದ ಜೊತೆ ಸಣ್ಣ -ಪುಟ್ಟ ಜೀವಿಗಳು ಕೂಡ ಆತಂಕದಲ್ಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ