ಮೈಸೂರು :
ಮಂಡ್ಯ, ಮೈಸೂರು ಸೇರಿದಂತೆ ಬೆಂಗಳೂರಿಗೆ ನೀರು ಒದಗಿಸುವ ಕೃಷ್ಣರಾಜ ಸಾಗರ(ಕೆ ಆರ್ ಎಸ್) ಜಲಾಶಯ ಸಂಜೆಯೊಳಗೆ ಭರ್ತಿಯಾಗಲಿದೆ.
ಕೊಡಗಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದುದರಿಂದ ಕೆಆರ್ಎಸ್ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಯಶ ಭರ್ತಿ ಆಗುವ ಹಂತಕ್ಕೆ ತಲುಪಿದೆ.
ಈಗಾಗಲೇ 123.45 ಅಡಿ ಭರ್ತಿಯಾಗಿದ್ದು, ಇಂದು ಸಂಜೆ ಗರಿಷ್ಠ ಮಟ್ಟ 124.80 ತಲುಪಿ ಸಂಪೂರ್ಣ ಭರ್ತಿಯಾಗಲಿದೆ. ಒಳ ಹರಿವು 18027 ಕ್ಯೂಸೆಕ್ ಮುಂದುವರೆದ್ರೇ,, ಇಂದು ಸಂಜೆಯೊಳಗೆ ಕೆ ಆರ್ ಎಸ್ ಡ್ಯಾಂ ಭರ್ತಿಯಾಗಲಿದೆ. ಅಲ್ಲದೇ ಹೊರ ಹರಿವು 2285 ಬಿಡಲಾಗುತ್ತಿದ್ದು, ಭರ್ತಿ ಆದ್ರೇ ಮತ್ತಷ್ಟು ಹೆಚ್ಚಳವಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ