ಬ್ಯಾನರ್, ಪೋಸ್ಟರ್ ಹಾಗೂ ಹೋಲ್ಡಿಂಗ್ಸ್ ತೆರವಿಗೆ ಡಿಸಿ ಆದೇಶ

ಹಾವೇರಿ

     ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಬಂಟಿಂಗ್, ಬ್ಯಾನರ್, ಪೋಸ್ಟರ್, ಹೋಲ್ಡಿಂಗ್ಸ್ ಇತ್ಯಾದಿಗಳನ್ನು ಇಂದೆ ತೆರವುಗೊಳಿಸಿ ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ನೀಡಿದ್ದಾರೆ.

     ಆಯಾ ತಾಲೂಕು ವ್ಯಾಪ್ತಿಯಲ್ಲಿ ಬರುವ ನಿರೀಕ್ಷಣಾ ಮಂದಿರಗಳನ್ನು ತಮ್ಮ ವಶಕ್ಕೆ ಪಡೆಯಬೇಕು. ಚುನಾವಣಾ ಆಯೋಗದ ನಿರ್ದೇಶನದಂತೆ 1000 ಮೇಲ್ಪಟ್ಟ ಮತದಾರರನ್ನು ಹೊಂದಿರುವ ಮತಗಟ್ಟೆಗಳ ಪೈಕಿ ಹೆಚ್ಚುವರಿ ಮತಗಟ್ಟೆಗಳನ್ನು ರಚಿಸಬೇಕು. ಮತಗಟ್ಟೆಗಳ ಸೌಕರ್ಯಗಳ ಕುರಿತಂತೆ (ಎ.ಎಂ.ಎಫ್) ಸ್ಥಾನಿಕ ಪರಿಶೀಲನೆ ನಡೆಸಿ ಮತಗಟ್ಟೆಗಳ ಸುಸ್ಥಿತಿ ಬಗ್ಗೆ ಇಂದೇ ವರದಿಮಾಡುವಂತೆ ಸೂಚಿಸಿದ್ದಾರೆ.

     ನಿಗಮ, ಮಂಡಳಿ ಹಾಗೂ ಎಪಿಎಂಸಿ ಅಧ್ಯಕ್ಷ/ಉಪಾಧ್ಯಕ್ಷರು ಉಪಯೋಗಿಸುತ್ತಿರುವ ಸರಕಾರಿ ವಾಹನಗಳನ್ನು ತಕ್ಷಣದಿಂದ ತಮ್ಮ ವಶಕ್ಕೆ ಪಡೆದುಕೊಳ್ಳಬೇಕು. ಮತದಾನಕ್ಕಾಗಿ ಪ್ರತಿ ಮತಗಟ್ಟೆಗೆ ಎರಡರಂತೆ ಮತಪೆಟ್ಟಿಗೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ತಹಶೀಲ್ದಾರಗಳಿಗೆ ಸೂಚನೆ ನೀಡಿದ್ದಾರೆ.

     ನೀತಿ ಸಂಹಿತ ತಂಡ ರಚನೆ: ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯನ್ನು ಮುಕ್ತ ಹಾಗೂ ನಿನ್ಸಪಕ್ಷಪಾತವಾಗಿ ಜರುಗಿಸಲು ಜಿಲ್ಲೆಯ ಏಳು ತಾಲೂಕಾ ವ್ಯಾಪ್ತಿಯಲ್ಲಿ ತಾಲೂಕಾ ಮಟ್ಟದ ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

      ಬ್ಯಾಡಗಿ ತಾಲೂಕಿಗೆ ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಪುಂಡಲಿಕ ಮಾನವರ (ಮೊ.9480843148), ಕಾಗಿನೆಲೆ ಕಂದಾಯ ನಿರೀಕ್ಷಕ ಆರ್.ಸಿ.ದ್ಯಾಮನಗೌಡ್ರ (ಮೊ.9740654518), ಹಾನಗಲ್ ತಾಲೂಕಿಗೆ ಪಂಚಾಯತ್ ರಾಜ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಮೇಶಕುಮಾರ ಹೂಗಾರ(9481214682), ಬೊಮ್ಮನಹಳ್ಳಿ ಕಂದಾಯ ನಿರೀಕ್ಷಕ ಎಸ್.ಎಂ.ಯತ್ತಿನಹಳ್ಳಿ (9448267693), ಹಾವೇರಿ ತಾಲೂಕಿಗೆ ಎಪಿಎಂಸಿ ಕಾರ್ಯದರ್ಶಿ ಪರಮೇಶ್ವರ ನಾಯಕ(99162 00393) ಹಾವೇರಿ ಕಂದಾಯ ನಿರೀಕ್ಷಕ ಬಿ.ಸಿ.ಕುಂಕುಮಗಾರ(7892934392), ಹಿರೇಕೆರೂರು ತಾಲೂಕಿಗೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಜಿ.ಶ್ರೀನಿವಾಸ (9480868115), ಕಂದಾಯ ನಿರೀಕ್ಷಕ ಸಂತೋಷ ಭಜಂತ್ರಿ(9902221569), ಸವಣೂರ ತಾಲೂಕಿಗೆ ಎಪಿಎಂಸಿ ಕಾರ್ಯದರ್ಶಿ ವಿರೇಂದ್ರ ಡಿ ಪಾಟೀಲ(9448100779), ಕಂದಾಯ ನಿರೀಕ್ಷಕ ಆರ್.ಬಿ.ಮಾಚಕನೂರ (96325 64679), ರಾಣೇಬೆನ್ನೂರ ತಾಲೂಕಿಗೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ಕಾಂಬಳೆ(9916870834), ಕಂದಾಯ ನಿರೀಕ್ಷಕ ಜಗತಾಪ(8773986829), ಶಿಗ್ಗಾಂವ ತಾಲೂಕಿಗೆ ಪಂಚಾಯತ್ ರಾಜ್ ಇಂಜನೀಯರ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೈಯದ್ ಮುಸ್ತಾಕ್ ಅಹ್ಮದ್(9611523998) , ಕಂದಾಯ ನಿರೀಕ್ಷಕ ಈಶ್ವರಗೌಡ ಪಾಟೀಲ(9686916496) ಇವರನ್ನು ನೇಮಕಮಾಡಿ ಆದೇಶ ಹೊರಡಿಸಿದ್ದಾರೆ.

     ನಿಯೋಜಿತ ಪ್ರತಿ ತಂಡಕ್ಕೆ ಓರ್ವ ವಿಡಿಯೋ ಗ್ರಾಫರ್ ನಿಯೋಜಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಬೇಕು. ರಾಜಕೀಯ ಸಭೆ, ಸಮಾರಂಭ ಇತರ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಿ ಪೂರ್ಣ ಚಿತ್ರೀಕರಣಗೊಳಿಸಿ ಆಯೋಗದ ವೀಕ್ಷಕರಿಗೆ ಕಳುಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link