ಹುಳಿಯಾರು : ಪದವಿ ಕಾಲೇಜಿನಲ್ಲಿ ಬಜೆಟ್ ನೇರ ವೀಕ್ಷಣೆ

 ಹುಳಿಯಾರು:

      ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಅರ್ಥಶಾಸ್ತ್ರ ವಿಭಾಗ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳೀಗೆ ಕೇಂದ್ರ ಬಜೆಟ್‍ನ ನೇರ ಪ್ರಸಾರ ವೀಕ್ಷಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.

     ಪ್ರಾಂಶುಪಾಲರಾದ ಕೃಷ್ಣಮೂರ್ತಿ ಬಿಳಿಗೆರೆ ವಿದ್ಯಾರ್ಥಿಗಳನ್ನು ಕುರಿತು ಕೇಂದ್ರ ಬಜೆಟ್‍ನ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು. ಪ್ರೊ. ಮಲ್ಲಿಕಾರ್ಜುನ ರವರು ಕೇಂದ್ರ ಬಜೆಟ್ ನಲ್ಲಿನ ವಾಣಿಜ್ಯ ಕ್ಷೇತ್ರಕ್ಕೆ ಕೊಡುಗೆ ಮತ್ತು ಸಂಪನ್ಮೂಲಗಳ ಹಂಚಿಕೆ ಬಗ್ಗೆ ಮಾತನಾಡಿದರು.
ಪ್ರೊ. ಫರ್ಹಾನಾಜ್ ರವರು ಕೇಂದ್ರದ ಬಜೆಟ್‍ನಲ್ಲಿ ಮುಖ್ಯವಲಯಗಳಾದ ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ ಕ್ಷೇತ್ರಗಳಿಗೆ ನೀಡಿದ ಸಂಪನ್ಮೂಲ ಹಂಚಿಕೆ ಬಗ್ಗೆ ಮಾತನಾಡಿದರು.

        ಕಾರ್ಯಕ್ರಮದಲ್ಲಿ ಗ್ರಂಥ ಪಾಲಕರಾದ ಡಾ.ಲೋಕೇಶ್ ನಾಯಕ, ದೈಹಿಕ ಶಿಕ್ಷಣ ನಿರ್ದೇಶಕರಾದ ಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap