ಶಿರಾ :
ನಗರದ ಜ್ಯೋತಿ ನಗರ ಬಡಾವಣೆಯ 3 ಮತ್ತು 4ನೇ ವಾರ್ಡಿನಲ್ಲಿ ಬೆಳಗ್ಗೆ 7.30ರಿಂದ ಸ್ವಚ್ಛತಾ ಕಾರ್ಯಗಳನ್ನು ಪೂರ್ಣಗೊಳಿಸಿ ಇಂದಿರಾ ಕ್ಯಾಂಟೀನ್ಗೆ ಶಾಸಕ ಡಾ.ಸಿ.ಎಂ.ರಾಜೇಶ್ಗೌಡ ತಿಂಡಿ ಸವಿದಿದ್ದಾರೆ.
ನಗರದ 3 ಮತ್ತು 4ನೇ ವಾರ್ಡಿನ ಸಾರ್ವಜನಿಕರಿಂದ ಭಾನುವಾರ ಬೆಳಗ್ಗೆ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ನಡೆಯಿತು. ಸದರಿ ಕಾರ್ಯಕ್ರಮದಲ್ಲಿ ತಾಸುಗಟ್ಟಲೆ ಸ್ವಚ್ಛತೆಯಲ್ಲಿ ಪಾಲ್ಗೊಂಡ ನಂತರ ಇಂದಿರಾ ಕ್ಯಾಂಟೀನ್ಗೆ ಬಂದ ಶಾಸಕರು ತಿಂಡಿಯ ಟೋಕನ್ ಪಡೆದು ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ತಿಂಡಿಯನ್ನು ಸವಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ