ಪಾವಗಡ : ರಾಮಕೃಷ್ಣಾಶ್ರಮದಿಂದ ಆಹಾರ ವಿತರಣೆ

 ಪಾವಗಡ :

      ಪಟ್ಟಣದಲ್ಲಿ ಕಫ್ರ್ಯೂ ಪ್ರಯುಕ್ತ ಯಾವುದೇ ಹೋಟೆಲ್ ಮತ್ತು ಆಹಾರದ ಅಂಗಡಿಗಳು ತೆರೆದಿಲ್ಲ. ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‍ನಿಂದ ಬಳಲುತ್ತಾ ದಾಖಲಾಗಿರುವ ರೋಗಿಗಳ ಕುಟುಂಬ ವರ್ಗದವರಿಗೆ ಎಲ್ಲಿಯೂ ಆಹಾರ ಸಿಗುತ್ತಿಲ್ಲ. ಆದ ಕಾರಣ, ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಬುಧವಾರ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕಿರಣ್ ರವರ ಮಾರ್ಗದರ್ಶನದಲ್ಲಿ ಸುಮಾರು 100 ಜನರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಲಾಯಿತು.

       ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಸುಮಾರು 100 ಜನರಿಗೆ ನಿತ್ಯವೂ ಊಟದ ವ್ಯವಸ್ಥೆ ಮಾಡಲು ಸ್ವಾಮಿ ಜಪಾನಂದಜಿ ನಿರ್ಧರಿಸಿದ್ದಾರೆ. ಸ್ವತಃ ಸ್ವಾಮೀಜಿಯವರೇ ಆಡಳಿತ ವೈದ್ಯಾಧಿಕಾರಿ ಡಾ.ಕಿರಣ್ ರವರಿಗೆ ಒಂದು ನೂರು ಊಟದ ಪೊಟ್ಟಣಗಳನ್ನು ಹಸ್ತಾಂತರಿಸಿದರು. ಇದರ ಜೊತೆಯಲ್ಲಿಯೇ ಒಂದು ನೂರು ಕುಡಿಯುವ ನೀರಿನ ಪಾಕೆಟುಗಳನ್ನು ಸಹ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಪಾವಗಡ ಬಸ್ ನಿಲ್ದಾಣದಲ್ಲಿ ಎಂದಿನಂತೆ ನಿರಾಶ್ರಿತರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ನೀರು, ಆಹಾರ ದೊರೆಯದೆ ಸಿಲುಕಿಕೊಂಡಿದ್ದ ಪ್ರಯಾಣಿಕರಿಗೆ ಊಟವನ್ನು ವಿತರಿಸಲಾಯಿತು. ಇದರೊಂದಿಗೆ ಶುದ್ಧ ಕುಡಿಯುವ ನೀರಿನ ಪಾಕೆಟುಗಳನ್ನು ಸಹ ನೀಡಲಾಯಿತು. ಒಟ್ಟಾರೆ ಸರಿಸುಮಾರು 300 ಜನರಿಗೆ ಊಟವನ್ನು ವಿತರಿಸಲಾಯಿತು.

       ಈ ಯೋಜನೆಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಇನ್ಫೋಸಿಸ್ ಫೌಂಡೇಷನ್ ರವರ ಸಮಯೋಚಿತ ಸಹಕಾರವನ್ನು ಸ್ವಾಮೀಜಿಯವರು ಕೊಂಡಾಡಿದರು. ಈ ಕಾರ್ಯಕ್ರಮದಲ್ಲಿ ಹಿಂದೂಪುರ, ಅರಸೀಕೆರೆ, ಅಮರಾಪುರ, ಪಳವಳ್ಳಿ, ತಿರುಮಣಿ, ಮಂಗಳವಾಡ, ಚಳ್ಳಕೆರೆ ಪ್ರದೇಶಗಳಿಂದ ಬಂದು ಸಿಲುಕಿಕೊಂಡಿರುವ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಹಾಗೂ ಆಹಾರವನ್ನು ವಿತರಿಸಲಾಯಿತು. ವಿವೇಕ ಬ್ರಿಗೇಡಿನ ಸದಸ್ಯರುಗಳಾದ ಭರತ್ ರಾಮಮೂರ್ತಿ, ವೇಣುಗೋಪಾಲರೆಡ್ಡಿ, ರವಿ (ಆಟೋಮೊಬೈಲ್ಸ್), ನಾಗರಾಜು, ಆಟೋ ಚಾಲಕರ ಸಂಘದ ಅಧ್ಯಕ್ಷರು ಮುಂತಾದವರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು.

Recent Articles

spot_img

Related Stories

Share via
Copy link