ಶಿರಾ :
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆಸುತ್ತಿರುವ ತಾರತಮ್ಯದ ಧೋರಣೆಯ ಆರ್ಥಿಕ ಚಟುವಟಿಕೆಗಳು ಜನ ಜೀವನವನ್ನು ಜಂಜಾಟಕ್ಕೆ ಸಿಲುಕಿಸಿವೆ. ಕೇಂದ್ರ-ರಾಜ್ಯ ಎರಡೂ ಸರ್ಕಾರಗಳು ಜನರ ಜೀವನದ ಜೊತೆ ಚೆಲ್ಲಾಟ ನಡೆಸಿವೆ ಎಂದು ಕಾಂಗ್ರೆಸ್ ಮುಖಂಡ ಸಂತೋಷ್ ಜಯಚಂದ್ರ ಹೇಳಿದರು.
ಎ.ಐ.ಸಿ.ಸಿ. ಮಾಜಿ ಅಧ್ಯಕ್ಷ ರಾಹುಲ್ಗಾಂಧಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ಘಟಕ ಹಾಗೂ ಯುವ ಕಾಂಗ್ರೆಸ್ ಘಟಕದ ವತಿಯಿಂದ ಶನಿವಾರ ಶಿರಾ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ಗಳನ್ನು ವಿತರಿಸಿ ಅವರು ಮಾತನಾಡಿದರು.
ಇಡೀ ದೇಶದ ಜನ ಕೋವಿಡ್ನಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಜನರ ಆರ್ಥಿಕ ಮಟ್ಟ ಸುಧಾರಿಸುವುದಕ್ಕೆ ಪರಿಹಾರ ಹುಡುಕದ ಬಿ.ಜೆ.ಪಿ. ಸರ್ಕಾರ ಅಡುಗೆ ಅನಿಲದಿಂದ ಹಿಡಿದು ಪೆಟ್ರೋಲ್, ಡೀಸೆಲ್ ಬೆಲೆಯನ್ನೂ ಏರಿಕೆ ಮಾಡಿ ಜನರ ಹೊಟ್ಟೆಯ ಮೇಲೆ ಹೊಡೆಯುವಂತಹ ಕೆಲಸ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ, ಸಾಯುತ್ತಿರುವ ಜನರಿಗೆ ಆಮ್ಲಜನಕವನ್ನೂ ನೀಡದೆ ಕುಳಿತಾಗ, ಕೊನೆಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿ, ಆಮ್ಲಜನಕವನ್ನು ಕೊಡಿಸಬೇಕಾದ ಪರಿಸ್ಥಿತಿಯನ್ನು ಈ ಸರ್ಕಾರ ತಂದುಕೊಂಡಿದೆ. ಇಷ್ಟಕ್ಕೂ ಸುಪ್ರೀಂ ಕೋರ್ಟ್ ಆದೇಶಕ್ಕೂ ಅಫಿಡವಿಟ್ ಹಾಕುವಷ್ಟರಮಟ್ಟಿಗೆ ಬಿಜೆಪಿ ನೇತೃತ್ವದ ಸರ್ಕಾರ ಮುಂದುವರಿದಿದ್ದು ವಿಪರ್ಯಾಸ. ದೇಶಕ್ಕೆ ಇದೀಗ ಮುಂದಿನ ದಿನಗಳಲ್ಲಿ ಹೊಸ ನಾಯಕತ್ವದ ಅಗತ್ಯವಿದೆ. ಇಂತಹ ಸಮರ್ಥವಾದ ನಾಯಕತ್ವ ವಹಿಸಿಕೊಳ್ಳುವ ಶಕ್ತಿ ರಾಹುಲ್ಗಾಂಧಿ ಅವರಿಗಿದ್ದು, ಅವರ ಕೈ ಬಲಪಡಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತ, ಮುಖಂಡರು ಮಾಡಬೇಕು ಎಂದು ಅವರು ತಿಳಿಸಿದರು.
ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಜಿ.ಎನ್.ಮೂರ್ತಿ, ರಾಜ್ಯ ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್ಲಾಖಾನ್, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಹುಣಸೇಹಳ್ಳಿ ಶಿವಕುಮಾರ್, ಆರ್.ನಾಗರಾಜು, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರೇಖಾ ರಾಘವೇಂದ್ರ, ಯುವ ಘಟಕದ ಅಧ್ಯಕ್ಷ ದಯಾನಂದ್ಗೌಡ, ತಾಪಂ ಸದಸ್ಯೆ ಮಂಜುಳಾಬಾಯಿ, ಮುಖಂಡರಾದ ಅಜಯ್ಕುಮಾರ್, ಮಣಿಕಂಠ, ಧರಣಿಕುಮಾರ್, ಹೆಚ್.ಎಲ್.ರಂಗನಾಥ್, ಪಿ.ಬಿ.ನರಸಿಂಹಯ್ಯ, ಹೇಮಂತ್ ಬಾಂಬೆ, ಕಲ್ಲುಕೋಟೆ ದೇವರಾಜು ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
